ದೇವಲಾಪುರ: ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯುತ್ ಕಾಯ್ದೆ ತಿದ್ದುಪಡಿ ವಿರೋಧಿಸಿ ದೇವಲಾಪುರ ಹೋಬಳಿ ಘಟಕ ಕರ್ನಾಟಕರಾಜ್ಯ ರೈತ ಸಂಘಹಾಗೂ ಹಸಿರುಸೇನೆ ಪ್ರತಿಭಟನೆ ನಡೆಸಿ ನಾಡಕಛೇರಿ ಉಪತಹಸೀಲ್ದಾರ ಜಗದೀಶರವರಿಗೆ ಮನವಿ ಸಲ್ಲಿಸಲಾಯಿತು.
ನಾಗಮಂಗಲತಾಲ್ಲೂಕು ದೇವಲಾಪುರ ಹೋಬಳಿಯ ಕರ್ನಾಟಕರಾಜ್ಯ ರೈತ ಸಂಘಹಾಗೂ ಹಸಿರು ಸೇನೆ
ಅದ್ಯಕ್ಷ ಸಿದ್ದರಾಜು ಅವರುಮಾತನಾಡಿ ಅಧಿವೇಶನದಲ್ಲಿ ರೈತರಿಗೆ ಭೂ ಸುಧಾರಣೆ ಕಾಯ್ದೆ . ಎಪಿಎಂಸಿ ಕಾಯ್ದೆ. ವಿದ್ಯುತ್ ಕಾಯ್ದೆ ಗಳಿಂದ ರೈತರಿಗೆ ತುಂಬಾ ಸಂಕಷ್ಟ ಎದುರಾಗಿದ್ದು ಸಮಸ್ಯೆಗಾಗಿ ಅಧಿವೇಶನದಲ್ಲಿ ರೈತರ ಪರ ನಿಂತುಜನಪ್ರತಿನಿದಿಗಳು ಅವರಿಗಾಗಿ ಭೂ ಸುಧಾರಣೆ ಕಾಯ್ದೆ . ಎಪಿಎಂಸಿ ಕಾಯ್ದೆ. ವಿದ್ಯುತ್ ಕಾಯ್ದೆ ವಿರೋಧಿಸಿ ಅಧಿವೇಶನದಲ್ಲಿ ರೈತ ಪರವಾಗಿ ಮಾತನಾಡಲೇಬೇಕು ಎಂದು ನಾಡಕಛೇರಿಯ ಮುಂದೆ ಧರಣಿ ನಡೆಸಿ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಕಾರ್ಯದರ್ಶಿಯಾದಜಗದೀಶ, ಪ್ರತಪ್, ನವೀನಕುಮಾರ, ಯಶವಂತ, ಮಹಿಳಾ ಆದ್ಯಕ್ಷರಾದ ಪುಟ್ಟಮ್ಮ, ರಾಮಪ್ಪ, ಪದದಾದಿಕಾರಿಗಳು ಹಲವರು ಭಾಗವಹಿಸಿದ್ದರು.