ಫಸಲ್ ಭೀಮಾ ಯೋಜನೆ ರೈತರ ದಾಖಲೆಗಳನ್ನು ಪರಿಶೀಲಿಸಲು ಸೂಚನೆ

0
57

ರಾಯಚೂರು: ಫಸಲ್ ಭೀಮಾ ಯೋಜನೆಗೆ ಹಣ ತುಂಬಿದ ರೈತರ ದಾಖಲೆಗಳನ್ನು ಪರಿಶೀ ಲಿಸಿ, ಬ್ಯಾಂಕ್ ಖಾತೆಗೆ ಹಣ ನೀಡಬೇಕು ಎಂದು ಅಪರ ಜಿಲ್ಲಾಧಿಕಾರಿ ದುರುಗೇಶ ಹೇಳಿದರು

ಅವರು ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಫಸಲ್ ಭಿಮಾ ಯೋಜನೆಯ ಕುರಿತು ಅಧಿಕಾರಿ ಮತ್ತು ರೈತರೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದರು.

Contact Your\'s Advertisement; 9902492681

ಕಳೆದ ವರ್ಷ ಮತ್ತು ಈ ವರ್ಷದಲ್ಲಿ ಫಸಲ್ ಭೀಮಾ ಯೋಜನೆಗೆ ಹಣ ತುಂಬಿದ ರೈತರ ಬ್ಯಾಂಕ್ ಖಾತೆಗೆ ಯಾಕೆ ಹಣ ಬಂದಿಲ್ಲ ಎಂದು ಪರಿಶೀಲಿಸಲು ಅಧಿಕಾರಿಗಳು ಸೂಚಿಸಿದರು.

ತಾಲೂಕು ಮತ್ತು ಗ್ರಾಮವಾರು ಪಟ್ಟಿಯನ್ನು ಪರಿಶೀಲನೆ ಮಾಡಿ ರೈತರ ಬ್ಯಾಂಕ್ ಖಾತೆ ಮತ್ತು ಆಧಾರ ಕಾರ್ಡ್ ದಾಖಲೆಯನ್ನು ಸಂಗ್ರಹಿಸಿ ಹಣ ಕಟ್ಟಿದ ರೈತರಿಗೆ ಹಣ ಪಾವತಿಸಬೇಕು, ಹಣ ಕಟ್ಟುವ ವೇಳೆ ಸರಿಯಾಗಿ ಹೆಸರು ಮತ್ತು ಬ್ಯಾಂಕಗ ಖಾತೆ ಯನ್ನು ಪರಿಶೀಲನೆ ಮಾಡಬೇಕು.ನಂತರ ಅಪ್ಲೋಡ್ ಮಾಡಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.

ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಸಂತೋಷ ಕಾಮರೆಡ್ಡಿ, ಅಧಿಕಾರಿಗಳು ಮತ್ತು ರೈತರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here