ದಿ.ಅಶೋಕ್ ಗಸ್ತಿ ಪತ್ನಿಗೆ ರಾಜ್ಯಸಭಾ ಸದಸ್ಯ ಸ್ಥಾನ ನೀಡಲು ಒತ್ತಾಯ

0
48

ರಾಯಚೂರು: ರಾಜ್ಯಸಭಾ ಸದಸ್ಯರಾಗಿದ್ದ ದಿ.ಅಶೋಕ್ ಗಸ್ತಿ ಅಕಾಲಿಕ ಸಾವಿಗೀಡಾಗಿದ್ದು ಅವರ ಸೇವೆ ಮರೆಯುವಂತಿಲ್ಲ ಅವರ ನೆನಪಿಗಾಗಿ ಅವರ ಪತ್ನಿಗೆ ರಾಜ್ಯಸಭಾ ಸದಸ್ಯ ಸ್ಥಾನ ನೀಡಬೇಕು ಎಂದು ರಾಯಚೂರು ನಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎನ್ ಮಹಾವೀರ ಹೇಳಿದರು.

ಅವರಿಂದು ನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸಾಮಾನ್ಯ ಕಾರ್ಯಕರ್ತರಾಗಿ ಬಿಜೆಪಿಯಲ್ಲಿ ಸೇವೆ ಸಲ್ಲಿಸಿದ ದಿ.ಅಶೋಕ್ ಗಸ್ತಿ ಅವರ ಸೇವೆಯನ್ನು ಪರಿಗಣಿಸಿ ರಾಜ್ಯಸಭಾ ಸದಸ್ಯ ಸ್ಥಾನ ನೀಡಿತ್ತು. ಜಿಲ್ಲೆಗೆ ೨೮ ವರ್ಷಗಳ ನಂತರ ಜಿಲ್ಲೆಗೆ ಅವಕಾಶ ನೀಡಿದ್ದು ಸಂತಸದ ಸಂಗತಿ ಆದರೆ ಅವರ ಅಕಾಲಿಕ ಮರಣದಿಂದ ಜಿಲ್ಲೆಗೆ ಬಿಜೆಪಿಗೆ ತುಂಬಲಾಗದ ನಷ್ಟ ವಾಗಿದೆ.ಅದನ್ನು ಸರಿದೂಗಿಸಲು ಸಾದ್ಯವಿಲ್ಲ ಎಂದರು.

Contact Your\'s Advertisement; 9902492681

ಅವರು ಕಳೆದ ೪೦ ವರ್ಷ ಗಳಿಂದ ಜಿಲ್ಲೆಯಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದರು.ಪ್ರಾಮಾಣಿಕ ಮತ್ತು ನಿಷ್ಠಾವಂತ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿದ್ದಾರೆ. ಸವಿತಾ ಸಮಾಜದಿಂದ ಏಕೈಕ ರಾಜ್ಯಸಭಾ ಸದಸ್ಯರಾಗಿ ಸಮಾಜಕ್ಕೆ ಆಸರೆಯಾಗಬೇಕಿದ್ದರು. ಆದರೆ ಅವರ ನಿಧನ ಸಮಾಜಕ್ಕೆ ಅಘಾತ ತಂದಿದೆ ಎಂದು ವಿಶಾದ ವ್ಯಕ್ತಪಡಿಸಿದರು.

ಬಿಜೆಪಿ ಸರ್ಕಾರ ಅವರ ಸೇವೆಯನ್ನು ಪರಿಗಣಿಸಿ ಅವರ ಪತ್ನಿಗೆ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಅವಕಾಶ ಕಲ್ಪಿಸಬೇಕು.ಸವಿತಾ ಸಮಾಜದ ಅಭಿವೃದ್ಧಿಗೆ ಹೆಚ್ಚಿನ ಅನುಧಾನ ಬಿಡುಗಡೆ ಮಾಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಹ್ಮದ್ ಖಾನ್ ಸಾಬ್, ಕೆವಿ.ಕಾಜಪ್ಪ, ಹನುಮಂತ, ಮಹೇಶ್, ಉದಯ್, ಭೀಮಣ್ಣ, ರಮೇಶ, ಬಸವರಾಜ, ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here