ಕೊಡಗು: ಗೌಡಳ್ಳಿ ಮತ್ತು ಡೊಡ್ಡಮಳ್ತೆ ರೈತ ಹೋರಾಟ ಸಮಿತಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡರ ನೇತೃತ್ವದಲ್ಲಿ ಬಿಟ್ಟಿಕಟೆ ಜಾಕ್ಷನ್ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ನಾವು ರೈತಾಪಿ ಕುಟುಂಬಗಳಿಂದ ಬಂದಿದ್ದ ಕೃಷಿಯೇ ನಮ್ಮ ಜೀವಾಳ, ಆದರೆ ಸರಕಾರಗಳು ತಂದಿರುವ ಭೂ ಸೂಧಾರಣೆ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆ ಹಾಗೂ ಆಹಾರ ಸಂಗ್ರಹಣಾ ಕಾರ್ಪೊರೇಷ್ ಪರ ಕಾಯ್ದೆಗಳಿಂದಾಗಿ ರೈತರ ಅತಂತ್ರ ಆಗುವುದಲ್ಲದೇ ಕಾರ್ಪೋರೆಟ್ ಕಂಪೆನಿಗಳ ಗುಲಾಮರಾಗಿ ಸಿಲುಕಲಿದ್ದಾರೆಂದು ಅವರು ತಿಳಿಸಿದರು.
ಸರಕಾರ ರೈತರಿಗೆ ಅನುಕೂಲವಾಗು ರೀತಿ ಕಾನೂನು ತರಬೇಕು, ರೈತರಿಗೆ ಮಾರಕವಾಗು ಕಾನೂನು ಜಾರಿಗೆ ತಂದರೆ ರಾಜದ್ಯಂತ ಪ್ರತಿಭಟನೆ ನಡೆಸಿ ಸರಕಾರಕ್ಕೆ ಬಿಸಿ ಮುಟ್ಟಿಸುವ ಎಚ್ಚರಿಕೆ ನೀಡಿದರು.
ಸೋಮವಾರ ಪೇಟೆ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿ ಸರಕಾರಕ್ಕೆ ಮನವಿ ಸಲ್ಲಿಸಿದರು.