ಸುರಪುರ: ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಮುಖಂಡರು ನಗರದ ಟೈಲರ್ ಮಂಜಿಲ್ನಲ್ಲಿ ಸಭೆ ನಡೆಸಿ ಸಂಘದ ಟಿ.ಬೊಮ್ಮನಹಳ್ಳಿ ಗ್ರಾಮ ಶಾಖೆಯನ್ನು ರಚನೆ ಮಾಡಿದರು.
ಈ ಸಂದರ್ಭದಲ್ಲಿ ಸಭೆಯ ಅಧ್ಯಕ್ಷತೆ ವಹಿಸಿದ್ದ ವೆಂಕೋಬ ದೊರೆ ಮಾತನಾಡಿ,ಜಗತ್ತಿಗೆ ರಾಮಾಯಣದಂತಹ ಮಹಾನ್ ಗ್ರಂಥವನ್ನು ನೀಡಿ ಜಗತ್ತಿಗೆ ಆದರ್ಶವಾಗಿರುವ ಶ್ರೀ ಮಹರ್ಷಿ ವಾಲ್ಮೀಕಿಯವರ ಹೆಸರಲ್ಲಿ ನಾವು ಸಂಘಟನೆ ಮಾಡುತ್ತಿರುವುದು ತುಂಬಾ ಸಂತೋಷದ ಸಂಗತಿಯಾಗಿದೆ ಎಂದರು.
ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ವೆಂಕಟೇಶ ಬೇಟೆಗಾರ ಮಾತನಾಡಿ, ನಾವೆಲ್ಲರು ಕೇವಲ ಸಂಘ ರಚನೆ ಮಾಡಿದರೆ ಮಾತ್ರ ಸಾಲದು ಎಲ್ಲರು ನಮ್ಮ ಸಮಾಜದ ಏಳಿಗೆಗೆ ಕೆಲಸ ಮಾಡಬೇಕು ಮತ್ತು ನಮ್ಮ ಸಮಾಜದ ಯಾವುದೇ ವ್ಯಕ್ತಿಗೆ ಅನ್ಯಾಯವಾದರೆ ಅವರ ಬೆಂಬಲಕ್ಕೆ ನಿಂತು ನ್ಯಾಯ ಕೊಡಿಸುವ ಕೆಲಸ ಮಾಡಬೇಕು ಅಂದಾಗ ಸಮಾಜ ಇನ್ನುಷ್ಟು ಬೆಳೆಯಲು ಸಾಧ್ಯವಿದೆ.ಅಲ್ಲದೆ ಈಗ ನಮ್ಮ ಎಸ್ಟಿ ಸಮುದಾಯಕ್ಕೆ ೭.೫ ಮೀಸಲಾತಿ ಪ್ರಮಾಣ ಹೆಚ್ಚಿಸಲು ಹೋರಾಟ ನಡೆಯುತ್ತಿದ್ದು ಎಲ್ಲರು ಒಕ್ಕೋರಲಿನಿಂದ ಇದಕ್ಕೆ ಬೆಂಬಲಿಸಿ ನಮ್ಮ ಹಕ್ಕನ್ನು ಪಡೆಯಬೇಕೆಂದರು. ಇದೇ ಸಂದರ್ಭದಲ್ಲಿ ಭಾಗವಹಿಸಿದ್ದ ಮುಖಂಡರಾದ ರಮೇಶ ದೊರೆ ಹಾಗು ಬಸವರಾಜ ಬಡಿಗೇರ ಮಾತನಾಡಿದರು.
ಸಭೆಯಲ್ಲಿ ಮುಖಂಡರಾದ ಭೀಮು ನಾಯಕ ಮಲ್ಲಿಬಾವಿ ಹಣಮಂತ್ರಾಯ ಕಟ್ಟಿಮನಿ ದೇವಿಂದ್ರಪ್ಪ ನಾಯ್ಕೋಡಿ ಶೆಳ್ಳಿಗೆಪ್ಪಗೌಡ ಪೊಲೀಸ್ ಪಾಟೀಲ್ ತಿಮ್ಮಣ್ಣ ನಾಯ್ಕೋಡಿ ಅಯ್ಯಪ್ಪ ಸತ್ಯಂಪೇಟೆ ಯಂಕೋಬ ನಾಯಕ ಶ್ರೀನಿವಾಸ ನಾಯಕ ಯಂಕು ನಾಯಕ ರಾಜಾ ನಾಯಕ ಬಸ್ಸು ನಾಯಕ ಇದ್ದರು.
ಗ್ರಾಮ ಶಾಖೆ ಪದಾಧಿಕಾರಿಗಳು: ಕಿಷ್ಟಪ್ಪ ನಾಯಕ ಗೌರವಾಧ್ಯಕ್ಷ, ಶರಣುಗೌಡ ಕಾರ್ಯಾಧ್ಯಕ್ಷ, ದೇವಿಂದ್ರಪ್ಪ ನಾಯಕ ,ಸದಾಶಿವ ಉಪಾಧ್ಯಕ್ಷರು ಶರಣುಗೌಡ ಹೆಚ್ ಪ್ರಧಾನ ಕಾರ್ಯದರ್ಶಿ ಹಣಮಂತ್ರಾಯ ಟಿ ಸಹ ಕಾರ್ಯದರ್ಶಿ ಸಂಗನಗೌಡ ಎನ್ ಸಂಘಟನಾ ಕಾರ್ಯದರ್ಶಿ ಹಣಮಂತ್ರಾಯ ಬಿ ಖಜಾಂಚಿ ಹಾಗು ನಾಗಪ್ಪ ಟಿ ಇವರನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ನೇಮಿಸಲಾಯಿತು.