ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಸಂಸ್ಥೆಯ ೩೦೦೧ನೇ ಮಹಿಳಾ ಗುಂಪು ಉದ್ಘಾಟನೆ

0
26

ಸುರಪುರ: ನಗರದ ಬಡಿಗೇರ ಬಾವಿ ಬಳಿಯಲ್ಲಿನ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಸಂಸ್ಥೆಯ ೩೦೦೧ನೇ ಮಹಿಳಾ ಗುಂಪು ಉದ್ಘಾಟನೆಯ ಸೃಜನಶೀಲ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ನಗರಸಭೆ ಸದಸ್ಯ ನರಸಿಂಹಕಾಂತ ಪಂಚಮಗಿರಿ ಜ್ಯೋತಿ ಬೆಳಗಿಸುವ ಮೂಲಕ ಗುಂಪು ಉದ್ಘಾಟಿಸಿ ಮಾತನಾಡಿ,ಇಡೀ ನಾಡಿನಾದ್ಯಂತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಉತ್ತಮವಾಗಿ ಕೆಲಸ ಮಾಡುತ್ತಿದೆ.ಕೇವಲ ತನ್ನ ವ್ಯವಹಾರ ಮಾತ್ರವಲ್ಲದೆ ಸಮಾಜಮುಖಿಯಾದ ಕೆಲಸಗಳ ಮೂಲಕ ಇತರೆ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದರು.

Contact Your\'s Advertisement; 9902492681

ಸಂಸ್ಥೆಯ ಯೋಜನಾಧಿಕಾರಿ ಸಂದೀಪ ಡಿ ಮಾತನಾಡಿ,ನಮ್ಮ ಸಂಸ್ಥೆಯು ಕಳೆದ ಐದು ವರ್ಷದ ಹಿಂದೆ ಈ ತಾಲೂಕಿಗೆ ಬಂದಾಗ ಯಾವುದೇ ಗುಂಪು ಇರಲಿಲ್ಲ ಆದರೆ ಇಂದು ಕೇವಲ ಐದೆ ವರ್ಷದಲ್ಲಿ ೩೦೦೧ ಗುಂಪುಗಳನ್ನು ಹೊಂದಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.ಅಲ್ಲದೆ ನಮ್ಮ ಸಂಸ್ಥೆಯು ಅನೇಕ ಜನಪರವಾದ ಕೆಲಸಗಳನ್ನು ಮಾಡುತ್ತಿದ್ದು ಇದಕ್ಕೆಲ್ಲ ತಾಲೂಕಿನ ಜನರ ಸಹಕಾರವೆ ಮುಖ್ಯವಾಗಿದೆ ಎಂದರು.

ನಂತರ ಅನೇಕರಿಗೆ ಆಯುಷ್ಮಾನ್ ಆರೋಗ್ಯ ಕಾರ್ಡ್‌ಗಳನ್ನು ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಎಎಸ್‌ಐ ಶ್ಯಾಮಸುಂದರ್ ನಾಯಕ ಯಾದಗಿರಿ ಜಿಲ್ಲಾ ಕೋ ಆರ್ಡಿನೇಟರ್ ನಾಗರಾಜ ಮೇಲ್ವಿಚಾರಕರು ರೇಖಾ ಜ್ಞಾನವಿಕಾಸ ಸವಿತಾ ಎಸ್.ಬಿಗಳಾದ ಸಂಗೀತಾ ಸಿದ್ದಮ್ಮ ರೇಖಾ ಮತ್ತು ರಾಧಾ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here