ಸುರಪುರ: ಕಳೆದ ನಾಲ್ಕು ದಿನಗಳಿಂದ ಸತತವಾಗಿ ಸುರಿದ ಮಹಾ ಮಳೆಯಿಂದ ತಾಲೂಕಿನ ಜಾಲಿಬೆಂಚಿ ಗ್ರಾಮದ ಊರ ಮುಂದಿನ ಕೆರೆಯ ಕೋಡಿ ಹೊಡೆದಿದ್ದು ನಿರ್ಮಿಸಲಾದ ಸೇತುವೆಯು ಕಿತ್ತಿಕೊಂಡು ಹೋಗಿದೆ.
ಈ ಸೇತುವೆಯ ಮೂಲಕ ನೂರಾರು ರೈತರು ತಮ್ಮ ಹೊಲ ಗದ್ದೆಗಳಿಗೆ ಹೋಗಬೇಕಿದೆ ಅಲ್ಲದೆ ಜನ ಜಾನುವಾರುಗಳು ಕೂಡ ಇದೇ ರಸ್ತೆಯಿಂದ ಹೋಗುವುದರಿಂದ ಈಗ ಜನರ ಓಡಾಟಕ್ಕೆ ತುಂಬಾ ತೊಂದರೆಯುಂಟಾಗಿದೆ.
ಜನರು ತಮ್ಮ ಹೊಲಗಳಿಗೆ ಹೋಗಲು ರಸ್ತೆಯಿಲ್ಲದೆ ಹೊಲದಲ್ಲಿನ ಬೆಳೆಗಳು ಏನಾಗಿವೆ ಎಂದು ಚಿಂತೆಗೀಡಾಗಿದ್ದಾರೆ. ಆದ್ದರಿಂದ ಮಾನ್ಯ ಶಾಸಕರು ಹಾಗು ಜಿಲ್ಲಾ ಪಂಚಾಯತಿಯ ಸದಸ್ಯರು ಗ್ರಾಮದತ್ತ ಗಮನ ಹರಿಸಿ ಆದಷ್ಟು ಬೇಗ ಈ ಸೇತುವೆಯನ್ನು ನಿರ್ಮಿಸಿಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.