ಪಂಚಮಸಾಲಿ ಸಮಾಜ 2 ಎ ಗೆ ಸೇರಿಸಲು ಬೆಳಗಾವಿ ಸುವರ್ಣ ಸೌಧ ಚಲೋ.

0
61

ಜೇವರ್ಗಿ: ಮೂಲತಃ ಕೃಷಿ ಆಧಾರಿತ ಸಮಾಜ ಪಂಚಮಸಾಲಿ ಸಮಾಜ ಈ ರಾಜ್ಯದಲ್ಲಿ ಸಾಕಷ್ಟು ಜನಸಂಖ್ಯೆ ಹೊಂದಿದ್ದು ಈ ಸಮಾಜವನ್ನು ಸರ್ಕಾರ 2 ಎ ಗೆ ಸೇರಿಸಬೇಕೆಂದು ದಿನಕ್ಕೆ 28 ರಂದು ಬೆಳಗಾವಿಯ ಸುವರ್ಣಸೌಧ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಮಹಾಸ್ವಾಮೀಜಿ ಅವರು ಹೇಳಿದರು.

ಜೇವರಗಿ ಷಣ್ಮುಖ ಶಿವಯೋಗಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಉದ್ದೇಶಿಸಿ ಮಾತನಾಡಿದರು ಕೇವಲ ಪಂಚಮಸಾಲಿ ಸಮಾಜ ಒಂದೇ ಅಲ್ಲ ಅದರಲ್ಲಿ ಬರುವ 101 ಉಪಪಂಗಡಗಳು ಕೂಡ 2 ಎ ಗೆ ಸೇರಿಸಬೇಕೆಂದು ನಮ್ಮ ಹಕ್ಕೊತ್ತಾಯವಾಗಿದೆ ಎಂದು ಹೇಳಿದರು.

Contact Your\'s Advertisement; 9902492681

ನಮ್ಮ ಸಮಾಜದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನಾವು ನ್ಯಾಯ ಕೇಳುತ್ತಿದ್ದೇವೆ ಇದು ಮುಖ್ಯಮಂತ್ರಿಗಳ ಮುಟ್ಟುವವರಿಗೂ ನಾವು ಹೋರಾಟ ಮಾಡಬೇಕಾದ ಅಗತ್ಯವಿದೆ ಎಂದು ಹೇಳಿದರು. ಬಿ.ಎಸ್.ಯಡಿಯೂರಪ್ಪನವರ ಅವಧಿಯಲ್ಲಿ ನಮ್ಮ ಸಮಾಜ 2 ಎ ಗೆ ಸೇರಿಸಬೇಕು ಎಂಬ ನಮ್ಮ ಮಹದಾಸೆಯಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಮತ್ತು ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್ ಮಸ್ಕಿ, ಜೇವರ್ಗಿ ಘಟಕದ ಅಧ್ಯಕ್ಷರ ಮಲ್ಲನಗೌಡ ಕುಳಗೇರಿ,ಶಹಾಪುರ ಸಮಾಜದ ಯುವ ಮುಖಂಡರಾದ ದೇವೇಂದ್ರಪ್ಪ ತೋಟಿಗೇರ, ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here