ಶರಣಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘದ ಉದ್ಘಾಟನೆ

0
76

ಕಲಬುರಗಿ: ಶರಣಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘದ ಉದ್ಘಾಟನಾ ಹಮ್ಮಿಕೊಳ್ಳಲಾಗಿತ್ತು.

ಮಹಾವಿದ್ಯಾಲಯದ ಪ್ರಾಚಾರ್ಯರಾದ ಎನ್.ಎಸ್.ಪಾಟೀಲರು ಪ್ರಾಸ್ತಾವಿಕವಾಗಿ ಮಾತನಾಡಿ ಸಂಘದ ಉದ್ದೇಶಗಳ್ಳನು ವಿವರಿಸಿ, ಎಲ್ಲರನ್ನೂ ಸ್ವಾಗತಿಸಿದರು. ನಂತರ ಹಳೆಯ ವಿದ್ಯಾರ್ಥಿ ಸಂಘದ ಅಧಿಕೃತ ವಾಗಿ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಶಿವಾನಂದ ಪಾಟೀಲ ಉದ್ಘಾಟಿಸಿದರು.

Contact Your\'s Advertisement; 9902492681

ನ್ಯಾಯವಾದಿಗಳಾದ ಬಸವರಾಜ ಬಿರಾದಾರ ಸೊನ್ನ ಮಾತನಾಡುತ್ತ ಶರಣಬಸವೇಶ್ವರ ಸಂಸ್ಥೆ UGC ನಿರ್ದೇಶನದಂತೆ ಹಳೆಯ ವಿದ್ಯಾರ್ಥಿಗಳ ಸಂಘದ ಹುಟ್ಟು ಹಾಕಿರುವುದು ನನಗೆ ಅತೀವ ಸಂತೋಷ ಉಂಟುಮಾಡಿದ್ದು, ತಾನು ಮನ ಧನದಿಂದ ಸಹಾಯ ಮಾಡಲು ಸಿದ್ಧನಿದ್ದೇನೆ ಎಂದು ತಿಳಿಸಿದರು.

ಜೇನವೆರಿ ವಿನೋದ ಕುಮಾರ ಪಾಲ್ಗೊಂಡು ಸಂಘದ ಅಜೀವ ಸದ್ಯಸ್ಯರಾಗಿ ನೊಂದಣಿಗೊಂಡು ಮಾತನಾಡುತ್ತಾ ಕಾಲೇಜಿನ ಮೊದಲ ಪ್ರಾಚಾರ್ಯ ದಿ. ಎಮ್. ಬಿ. ಓಣಿ ಯವರನ್ನು ನೆನದು ಭಾವುಕರಾದರು. ಸಂಘದ ಕಾರ್ಯಕರಣಿ ಪ್ರದೀಪ ದಾಭಶೆಟ್ಟಿ, ಸಂಘದ ಕಾರ್ಯದರ್ಶಿ ಎಸ್. ಎಸ್. ಶೇಟಗಾರ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here