ಕಲಬುರಗಿ: ನಗರದ ಶ್ರೀ ಶರಣಬಸವೇಶ್ವರ ದೆವಸ್ಥಾನದಲ್ಲಿ ೮ನೇ ಪೀಠಾಧಿಪತಿಗಳು, ಶ್ರೀ ಶರಣಬಸವೇಶ್ವರ ಸಂಸ್ಥಾನ ಹಾಗೂ ಶರಣಬಸವ ವಿಶ್ವ ವಿದ್ಯಾಲಯದ ಕುಲಾಧಿಪತಿಗಳಾದ ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರ ೮೭ನೇ ಜನ್ಮದಿನದ ಅಂಗವಾಗಿ ಕನ್ನಡ ಸೈನ್ಯದಿಂದ ಶತಾಯುಷಿ ಆಗಲೆಂದು ೧೦೧ ತೆಂಗಿನಕಾಯಿ ಹರಕೆ ಹಾಗೂ ದೀಡ್ ನಮಸ್ಕಾರವನ್ನು ಸೈನೆಯ ಸಂಸ್ಥಾಪಕ ಅಧ್ಯಕ್ಷ ಸೋಮನಾಥ ಎಲ್. ಕಟ್ಟಿಮನಿ ಅವರು ಹಾಕಿದರು.
ಶರಣಬಸವೆಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಪದಾಧಿಕಾರಿಗಳಾದ ಶಂಕರ ತಾಳಿಕೋಟಿ, ನಾಗರಾಜ ಕಟ್ಟಿಮನಿ, ರಾಜಕುಮಾರ, ನಾಗೀಂದ್ರಪ್ಪ ಹಾಗರಗಿ, ಸಂತೋಷ ಹಾಗರಗುಂಡಗಿ, ಕವಿರಾಜ ಕೋರಿ, ಶರಣು ಗೋಳಾ, ವಿಶ್ವನಾಥ, ಗೀರಿಶ ಪಾಟೀಲ್, ಸುರೇಶ ಗೋಳಾ, ಮಹೇಂದ್ರ ಗೋಳಾ, ಬಸವರಾಜ ಕಟ್ಟಿಮನಿ, ಶ್ರೀಧರ ಕಟ್ಟಿಮನಿ, ಅಕ್ಷಯ ಕಟ್ಟಿಮನಿ, ಮೋಹನರಾಜ, ಶರಣು ಹಾಗರಗಿ, ರಾಹುಲ ಕಟ್ಟಮನಿ, ತರುಣ ಹರಳಯ್ಯ, ರಾಜಕುಮಾರ ಗುತ್ತೇದಾರ ಇದ್ದರು.