ಶಹಾಬಾದ:ಹೊನಗುಂಟಾ ಗ್ರಾಮಲೇಖಪಾಲಕ ಹಣಮಂತರಾಯ ಅವರನ್ನು ಬೇರೆ ಕಡೆ ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿ ಶುಕ್ರವಾರ ದಲಿತ ವಿದ್ಯಾರ್ಥಿ ಒಕ್ಕೂಟದ ವತಿಯಿಂದ ಉಪತಹಸೀಲ್ದಾರ ಮಲ್ಲಿಕಾರ್ಜುನ ರೆಡ್ಡಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ದಲಿತ ವಿದ್ಯಾರ್ಥಿ ಒಕ್ಕೂಟದ ತಾಲೂಕಾ ಸಂಚಾಲಕ ಪೂಜಪ್ಪ ಮೇತ್ರೆ,ಈಗಾಗಲೇ ಭೀಮಾ ಹಾಗೂ ಕಾಗಿಣಾ ನದಿಯ ಪ್ರವಾಹಕ್ಕೆ ಒಳಗಾದ ಸಮೀಕ್ಷೆಯ ಪಟ್ಟಿ ನೀಡಿ ಎಂದು ಕೇಳಿದರೇ, ಅಸಭ್ಯ ವರ್ತನೆ ತೋರುತ್ತಾರೆ. ಅಲ್ಲದೇ ಸಂಘಟನೆ ವತಿಯಿಂದ ಮನವಿ ಮಾಡಿ ಸುಮಾರು ಹದಿಮೂರು ದಿನಗಳ ನಂತರ ಮತ್ತೆ ಬಂದು ಕೇಳಿದರೇ , ಏಕವಚನದಲ್ಲಿ ಏನು ಮಾಡಕೋತ್ತಿರಿ, ಮಾಡಕೋರಿ ಎಂದು ಎಂದು ಮಾತನಾಡುತ್ತಿದ್ದಾರೆ.ಗ್ರಾಮದ ಜನರು ಈಗಾಗಲೇ ಪ್ರವಾಹದಿಂದ ನಲುಗಿ ಹೋಗಿದ್ದಾರೆ.ಅಂತಹ ಅರ್ಹ ಫಲಾನುಭವಿಗಳಿಗೆ ಪರಿಹಾರ ಧನ ನೀಡಿಲ್ಲ. ಸಮೀಕ್ಷೆ ನಡೆಸಿದ ಒಂದು ಪಟ್ಟಿ ನೀಡಲು ಆಗುತ್ತಿಲ್ಲ.ಅಲ್ಲದೇ ಸಭ್ಯವಾಗಿ ಮಾತನಾಡಲು ಗೊತ್ತಿಲ್ಲದ ಒಬ್ಬ ಗ್ರಾಮ ಲೇಖಪಾಲಕ ನಮ್ಮೂರಿಗೆ ಬೇಕಿಲ್ಲ.ಇಂತಹ ಒಬ್ಬ ವ್ಯಕ್ತಿಯಿಂದ ಇಡೀ ಕಂದಾಯ ಇಲಾಖೆಗೆ ಕೆಟ್ಟ ಹೆಸರು ಬರುತ್ತದೆ.ಆದ್ದರಿಂದ ಕೂಡಲೇ ಇವರನ್ನು ಇಲ್ಲಿಂದ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿದರು.
ದಲಿತ ವಿದ್ಯಾರ್ಥಿ ಒಕ್ಕೂಟದ ಸಂಘಟನಾ ಸಂಚಾಲಕ ಶರಣಬಸಪ್ಪ.ಎಮ್,ರಾಘವೇಂದ್ರ ಗುಡೂರ್, ಮಲ್ಲಿಕಾಜರ್ುನ, ಸಂತೋಷ ಹಾದಿಮನಿ, ಮರೆಪ್ಪ ಮೇತ್ರೆ, ಮೈಲಾರಿ, ನಾಗಪ್ಪ ನ್ಯಾವಿನಿ ಇತರರು ಇದ್ದರು.