ಕಲಬುರಗಿ: ಪ್ರಜ್ಞಾ ದಿ ಇನ್ಸ್ ಟ್ಯೂಟ್ ಆಫ್ ಇನ್ನೋವೇಟೀವ್ ಲರ್ನಿಂಗ್ ಕಲಬುರಗಿ ಇವರ ವತಿಯಿಂದ ನಗರದ ಸಂಗೀತ ಕಲಾ ಮಂಡಳ ಸಭಾ ಭವನದಲ್ಲಿ ನಾಳೆ 28 ರಂದು ಸಂಜೆ 4ಕ್ಕೆ ಕೌನ ಬನೇಗಾ ಜ್ಞಾನಪತಿ ಎನ್ನುವ ವಿಶಿಷ್ಠ ವಿನೂತನ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಲಬುರಗಿ ಜಿಲ್ಲಾ ಪಂಚಾಯತ್ ವಿರೋಧ ಪಕ್ಷದ ನಾಯಕ ಶಿವಾನಂದ ಬಿ. ಪಾಟೀಲ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದು, ಮುಖ್ಯ ಅಥಿತಿಗಳಾಗಿ ಮಾಜಿ ವಿಧಾನ ಪರಿಷತ ಸದಸ್ಯ ಅಲ್ಲಮಪ್ರಭು ಪಾಟೀಲ, ನೀಲಕಂಠರಾವ್ .ಎಸ್. ಮೂಲಗೆ, ಅಜೀತ್ ಕುಮಾರ ಪೋಲಿಸ್ ಪಾಟೀಲ್, ಕುಪೇಂದ್ರ ಬರಗಾಲಿ ಕುಸನೂರ, ಧರ್ಮರಾಜ್ ಹೇರೂರ, ಸತ್ಯಂ ಪಿ.ಯು.ಕಾಲೇಜು ಪ್ರಾಂಶುಪಾಲರಾದ ಬಿ.ಎಚ್. ನಿರಗುಡಿ, ಚಾಮರಾಜ್ ದೊಡ್ಡಮನಿ, ಗಿರೀಶ ಕಡ್ಲೆವಾಡ, ಪ್ರಜ್ಞಾ ಸಂಸ್ಥೆ ಅಧ್ಯಕ್ಷರಾದ ಕಾಶಿನಾಥ ಎಚ್. ಪುಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಜ್ಞಾ ದಿನ ಇನ್ಸ್ ಟ್ಯೂಟ್ ಆಫ್ ಇನ್ನೋವೇಟೀವ್ ಲರ್ನಿಂಗ್ನ ಕಾರ್ಯನಿರ್ವಾಹಕ ನಿರ್ದೇಶಕರಾದ ಕೆ.ಎಂ.ವಿಶ್ವನಾಥ ಮರತೂರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.