ಶ್ರೀರಾಮ ಸೇನೆ ನಗರ ಘಟಕಕ್ಕೆ ನೇಮಕ

0
38

ಕಲಬುರಗಿ: ನಗರದ ಶ್ರೀರಾಮ ಸೇನೆ ಕಚೇರಿಯಲ್ಲಿ ಸೇನೆಯ ರಾಜ್ಯಾಧ್ಯಕ್ಷರಾದ ಪೂಜ್ಯ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರ ಆದೇಶದ ಮೇರೆಗೆ ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷರಾದ ಮಹೇಶ ಎಚ್ ಗೊಬ್ಬುರ್ ಅವರ ನೇತೃತ್ವದಲ್ಲಿ ನೂತನ ಶ್ರೀರಾಮ ಸೇನೆಯ ಜಿಲ್ಲಾ ಉಪಾಧ್ಯಕ್ಷರಾಗಿ ಸಚಿನ ಎಸ್ ಕುಮಸಿ, ಜಿಲ್ಲಾ ನಗರಾಧ್ಯಕ್ಷರಾಗಿ ಮಲ್ಲಿಕಾರ್ಜುನ ಮೋರಟಗಿ, ಹಾಗೂ ಜಿಲ್ಲಾ ಉತ್ತರ ವಲಯ ನಗರಾಧ್ಯಕ್ಷರಾಗಿ ರಮೇಶ ಎಸ್ ದೇಸಾಯಿ ಅವರನ್ನು ಒಂದು ವರ್ಷದ ಅವಧಿಗೆ ನೇಮಕ ಮಾಡಿ ಆದೇಶ ಪತ್ರ ನೀಡಿದರು.

ಜಿಲ್ಲಾ ಪ್ರಮುಖರಾದ ಶಶಿಕಾಂತ ಆರ್ ದೀಕ್ಷಿತ, ಕಾನೂನು ಸಲಹೆಗಾರರಾದ ಚಂದ್ರಕಾಂತ ಕಾಳಗಿ, ಮಹೇಶ ಕೆಂಬಾವಿ, ರಾಜೇಶ ಗೊಬ್ಬುರ್, ಶಿವು ಕುಮಸಿ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here