ಸುರಪುರ: ದೇಶದಲ್ಲಿ ನಿತ್ಯವುಕೂಡ ಯುವತಿಯರು ಅಪ್ರಾಪ್ತರ ಮೇಲೆ ಅತ್ಯಾಚಾರ ಮತ್ತು ಕೊಲೆಯಂತಹ ಕ್ರೂರ ಕೃತ್ಯಗಳು ಜರಗುತ್ತಿವೆ,ಇದಕ್ಕೆ ಕಡಿವಾಣ ಹಾಕುವಲ್ಲಿ ಸರಕಾರಗಳು ಸಂಪೂರ್ಣವಾಗಿ ವಿಫಲವಾಗಿವೆ,ಈಗ ಮದ್ದೂರು ತಾಲೂಕಿನ ಉರಗಲವಾಡಿ ಗ್ರಾಮದಲ್ಲಿ ಮತ್ತೆ ಅಪ್ರಾಪ್ತ ಯುವತಿಯ ಮೇಲೆ ಅತ್ಯಾಚಾರ ನಡೆದು ಸತ್ಯ ಮಾಡಲಾಗಿದೆ,ಈ ಕೃತ್ಯಕ್ಕೆ ಕಾರಣರಾದ ಕಾಮುಕರಿಗೆ ಗಲ್ಲು ಶಿಕ್ಷೆಗೆ ಗುರಿಪಡಿಸುವಂತೆ ಮಲ್ಲಿಕಾರ್ಜುನ ಕ್ರಾಂತಿ ಆಗ್ರಹಿಸಿದರು.
ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣ ದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ,ಉರಗಲವಾಡಿ ಗ್ರಾಮಕ್ಕೆ ಹೊಸಪೇಟೆ ತಾಲೂಕಿನ ತಾಳೆಬಸ್ಸಾಪುರ ತಾಂಡಾದ ಬಂಜಾರ ಸಮುದಾಯದ ಜನರು ಕಬ್ಬು ಕಟಾವಿನ ಕೆಲಸಕ್ಕೆ ಹೋಗಿದ್ದು,ಅವರ ಕುಟುಂಬದ ಅಪ್ರಾಪ್ತ ಬಾಲಕಿಯನ್ನು ಕಾಮುಕರು ಅತ್ಯಾಚಾರ ನಡೆಸಿದ್ದಾರೆ,ಯುವತಿ ಕಿರುಚಿದ್ದಕ್ಕಾಗಿ ಅವಳನ್ನು ಹತ್ಯೆ ಮಾಡಲಾಗಿದೆ,ಈ ಘಟನೆ ಅಮಾನವೀಯವಾಗಿದೆ.ಕೂಡಲೆ ಘಟನೆಗೆ ಕಾರಣರಾದವರನ್ನು ಬಂಧಿಸಿ ಮೂರು ತಿಂಗಳೊಳಗೆ ವಿಚಾರಣೆ ಮಾಡಿ ಗಲ್ಲು ಶಿಕ್ಷೆಯನ್ನು ನೀಡಬೇಕೆಂದು ಆಗ್ರಹಿಸಿದರು.
ನಂತರ ರಾಷ್ಟ್ರಪತಿಗಳಿಗೆ ಬರೆದ ಮನವಿಯನ್ನು ತಹಸೀಲ್ ಸಿರಸ್ಥೇದಾರ ಮೂಲಕ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಸಂಘಟನೆಯ ತಾಲೂಕು ಸಂಚಾಲಕ ತಿಪ್ಪಣ್ಣ ಶೆಳ್ಳಗಿ ಮಾನಪ್ಪ ಬಿಜಾಸಪುರ ಬುದ್ಧಿವಂತ ನಾಗರಾಳ ಜೆಟ್ಟೆಪ್ಪ ನಾಗರಾಳ ಮರಿಲಿಂಗಪ್ಪ ಹುಣಸಗಿ ಭೀಮಣ್ಣ ಕ್ಯಾತನಾಳ ಶೇಖಪ್ಪ ಭಂಡಾರೆ ಸೇರಿದಂತೆ ಅನೇಕರಿದ್ದರು.