ಕಲಬುರಗಿ: ದೇಶದಲ್ಲಿ ರೈತರ ಮುಷ್ಕರದೊಂದಿಗೆ ಕಳೇದ ಎರಡು ದಿನಗಳಿಂದ ರಾಜ್ಯ ಸಾರಿಗೆ ಇಲಾಖೆಯ ನೌಕರರು ತಮ್ಮ ಬೇಡಿಕೆಗಳಿಗೆ ಆಗ್ರಹಿಸಿ ಕಳೆದ ಮುಷ್ಕರ ನಡೆಸುತ್ತಿದ್ದಾರೆ. ಇಂದು ಸಹ ಮುಂದುವರೆದಿದೆ.
ಜಿಲ್ಲೆಯ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದು, ಜಿಲ್ಲೆಯ ಕೇಂದ್ರ ಬಸ್ ನಿಲ್ದಾಣ ಸಂಪೂರ್ಣ ಬಿಕೋವಾಗಿ ಕಾಣತೊಡಗಿತ್ತು. ಅಲ್ಲದೇ ಬಹುತೇಕ ಸಾರಿಗೆ ಇಲಾಖೆಯ ನೌಕರರು ಬೇಡಿಕೆಗಳ ಈಡೇರಿಕಗಾಗಿ ಪ್ರತಿಭಟನೆ ನಡೆಸಿದ್ದಾರೆ.
ರಾಜ್ಯ ಸರಕಾರ ಮಾತ್ರ ಕಳೆದ ಎರಡು ದಿನಗಳಿಂದ ಮುಷ್ಕರ ನಿರತ ನೌಕರರ ಮನವೊಲಿಸಲು ವಿಫಲಯತ್ನ ನಡೆಸುತ್ತಿರುವ ಎದ್ದು ಕಾಣುತ್ತಿದ್ದು, ಸರಕಾರ ಮತ್ತು ನೌಕರರ ಮಧ್ಯ ಸಾರ್ವಜನಿಕರು ಕಷ್ಟ ಅನುಭವಿಸುಂತಹದಾಗಿದೆ.
ಅಲ್ಲದೇ ಸಮಯವನ್ನು ಬಂಡವಾಳವಾಗಿ ಮಾಡಿಕೊಂಡಿರು ಖಾಸಗಿ ಸಂಚಾರ ಮಾಲಿಕರು ಪ್ರಯಾಣ ದರದಲ್ಲಿ ಏರಿಕೆ ತಂದಿರುವುದಾಗಿ ಪ್ರಾಯಣಿಕರ ಆರೋಪಗಳು ಬಲವಾಗಿ ಕೇಳಿಬರುತ್ತಿವೆ.