ಶರಣರ ವಿಚಾರಧಾರೆಗಳೆ ಬದುಕಿಗೆ ಸ್ಫೂರ್ತಿ: ಶಿವಣ್ಣ ಇಜೇರಿ

0
81

ಶಹಾಪುರ :ವೈಜ್ಞಾನಿಕ ವಿಚಾರಧಾರೆಯನ್ನೊಳಗೊಂಡ ಶರಣ ಸಾಹಿತ್ಯ,ಶರಣ ಸಂಸ್ಕೃತಿಯ ಪ್ರತೀಕವಾದ ಕಾಯಕ,ನಿಷ್ಠೆ,ಹಾಗೂ ಬಸವಾದಿ ಶರಣರ ತತ್ವಾದರ್ಶಗಳೆ ನನ್ನ ಬದುಕಿಗೆ ಸ್ಫೂರ್ತಿ ಎಂದು ಹಿರಿಯ ಸಾಹಿತಿ ಶಿವಣ್ಣ ಇಜೇರಿ ಹೇಳಿದರು.

ನಗರದ ಕುಂಬಾರ ಓಣಿಯ ಕಾಯಕ ನಿಲಯದಲ್ಲಿ ಸಗರದ ಕಲಾನಿಕೇತನ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿರುವ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದ ತಿಂಗಳ ಅತಿಥಿಯಾಗಿ ಭಾಗವಹಿಸಿ ತಮ್ಮ ಮನದಾಳದ ಮಾತುಗಳನ್ನಾಡಿದರು.

Contact Your\'s Advertisement; 9902492681

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಿದ್ದಲಿಂಗಣ್ಣ ಆನೇಗುಂದಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಶಿವಣ್ಣ ಇಜೇರಿ ಅವರು ಒಬ್ಬ ನೇರ,ದಿಟ್ಟ, ನಿರಂತರ,ಇದ್ದ ವಿಷಯವನ್ನು ಇದ್ದ ಹಾಗೆಯೇ ಹೇಳುವ ನಿಷ್ಟುರ,ಯಾರಿಗೂ ಅಂಜದೆ ಅಳುಕದೆ ನೇರವಾಗಿ ನುಡಿಯುವ ಶರಣ ಸಾಹಿತಿ ಎಂದು ಹೇಳಿದರು.ಅವರು ಬಹಳ ಕಡು ಬಡತನದಿಂದ ಬಂದವರು ಸುಮಾರು ೪೦ ವರ್ಷಗಳ ಕಾಲ ಒಂದೆ ಅಂಗಡಿಯಲ್ಲಿ ಗುಮಾಸ್ತನಾಗಿ ಇಂದಿಗೂ ಸೇವೆ ಸಲ್ಲಿಸುತ್ತಿರುವುದು ನಿಜಕ್ಕೂ ಶ್ಲಾಘನೀಯವಾದದ್ದು, ಕಾಯಕದಲ್ಲಿ ಅವರಿಗಿರುವ ನಂಬಿಕೆ,ವಿಶ್ವಾಸ,ಅವರಲ್ಲಿ ಕಾಣಬಹುದು ಎಂದರು.

ಇನ್ನೋರ್ವ ಮುಖ್ಯ ಅತಿಥಿಗಳಾದ ಹಿರಿಯ ಸಾಹಿತಿ ಡಾ:ಅಬ್ದುಲ್ ಕರೀಂ ಕನ್ಯಾಕೋಳೂರ ಮಾತನಾಡಿ ಶಿವಣ್ಣ ಇಜೇರಿ ಯವರ ಸಾಹಿತ್ಯ ಬಹಳ ಮೊನಚಾದ ಬರಹಗಳ ಜತೆಗೆ ಸಮಾಜದ ಓರೆಕೋರೆಗಳನ್ನು ತಿದ್ದಿ ಬಹುಬೇಗ ಜನಸಾಮಾನ್ಯರನ್ನು ತಲುಪಿ ಜನಪ್ರಿಯತೆ ಪಡೆಯುವ ಸಾಹಿತ್ಯವಾಗಿದೆ ಎಂದು ನುಡಿದರು,ಸೌಮ್ಯ ಹಾಗೂ ಮುಗ್ಧ ಮನಸ್ಸಿನ ಹಿರಿಯ ಭಾವ ಜೀವಿ ಎಂದು ಬಣ್ಣಿಸಿದರು ಅವರು ರಚಿಸಿದ ೫ ಕೃತಿಗಳು ಉಡಿಯಲ್ಲಿಯ ಉರಿ,ಕರಗದ ಬೆಣ್ಣೆ,ಕಣ್ಮರೆಯ ಬೆಳಕು, ಆಧುನಿಕ ವಚನಗಳು, ದಾರಿದೀಪ, ಬಹಳ ಅರ್ಥಪೂರ್ಣವಾಗಿ ಹೊರಬಂದಿವೆ ಅಷ್ಟೇ ಮಾರ್ಮಿಕವಾಗಿ ಅದರಲ್ಲಿ ವಿಷಯ ಕೂಡ ಅಡಗಿದೆ ಇಂದಿನ ವಾಸ್ತವ ಬದುಕಿಗೆ ಈ ಕೃತಿಗಳು ಸ್ಫೂರ್ತಿಯಾಗಿವೆ ಎಂದರು.

ಅತಿಥಿಗಳಾಗಿ ಆಗಮಿಸಿದ ಡಾ. ಗೋವಿಂದರಾಜ ಆಲ್ದಾಳ ಮಾತನಾಡಿ ಶಿವಣ್ಣ ಇಜೇರಿ ಅವರು ಶಿಕ್ಷಣ ಅಲ್ಪಸ್ವಲ್ಪ ಪಡೆದರೂ ಸಾಹಿತ್ಯಿಕವಾಗಿ ಅಪಾರ ಜ್ಞಾನ ಭಂಡಾರೆ ಅವರಲ್ಲಿ ಅಡಗಿದೆ ಬದುಕಿನ ದುದ್ದಕ್ಕೂ ಶರಣರ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದಾರೆ,ಇದಕ್ಕೆಲ್ಲಾ ಕಾರಣ ಶರಣ ಸಾಹಿತಿ ಲಿಂಗಣ್ಣ ಸತ್ಯಂಪೇಟೆಯವರ ಒಡನಾಟ,ಅವರೊಬ್ಬ ನುಡಿದಂತೆ ನಡೆಯುವ ವ್ಯಕ್ತಿ ಒಂದೇ ನೆಲೆಗಟ್ಟಿನಲ್ಲಿರುವ ಬದುಕು ಮತ್ತು ಬರಹ ಮೈಗೂಡಿಸಿಕೊಂಡಿದ್ದಾರೆ ಎಂದು ಹೇಳಿದರು.

ಟ್ರಸ್ಟಿನ ಅಧ್ಯಕ್ಷರಾದ ಬಸವರಾಜ ಸಿನ್ನೂರ ಮಾತನಾಡಿ ನಾಡಿನ ಹಿರಿಯ ಸಾಹಿತಿಗಳನ ಸಂಶೋಧಕರನ ಸಾಧಕರನ್ನ ಗುರುತಿಸಿ ಗೌರವಿಸಿ ಅವರನ್ನು ಕರೆತಂದು ನಾಡಿಗೆ ಪರಿಚಯಿಸುವುದೇ ಈ ಮನೆಯಂಗಳದ ಮಾತುಕತೆಯ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ,ಮುಂಬರುವ ದಿನಗಳಲ್ಲಿ ನಿರಂತರವಾಗಿ ಈ ಕಾರ್ಯಕ್ರಮವನ್ನು ಮುನ್ನಡೆಸಿ ಕೊಂಡು ಹೋಗಬೇಕೆಂಬ ಕಾಯಕಲ್ಪ ನಮ್ಮದಾಗಿದೆ. ಅದಕ್ಕೆ ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿಕೊಂಡು ಪ್ರಾಸ್ತಾವಿಕ ನುಡಿಗಳಲ್ಲಿ ಹೇಳಿದರು.

ನಂತರ ಜರುಗಿದ ಸಂವಾದದಲ್ಲಿ ಉಪನ್ಯಾಸಕರಾದ ಡಾ. ರವೀಂದ್ರನಾಥ ಹೊಸ್ಮನಿ, ವಿಮರ್ಶಕರಾದ ಸಿ,ಎಸ್, ಭೀಮರಾಯ. ಪ್ರಾಂಶುಪಾಲರಾದ ಮಲ್ಲಿಕಾರ್ಜುನ ಆವಂಟಿ, ಶಿಕ್ಷಕರು ಹಾಗೂ ಸಾಹಿತಿಗಳಾದ ಪಂಚಾಕ್ಷರಯ್ಯ ಹಿರೇಮಠ, ಕೇಳಿದ ಪ್ರಶ್ನೆಗಳಿಗೆ ಶಿವಣ್ಣ ಇಜೇರಿ ಅವರು ಸಮರ್ಪಕವಾಗಿ ಉತ್ತರಿಸಿದರು.

ಕಾರ್ಯಕ್ರಮವನ್ನು ಶಿವಪ್ರಸಾದ್ ಕರದಳ್ಳಿ ನಿರೂಪಿಸಿದರು ಮಲ್ಲಿಕಾರ್ಜುನ ಸಜ್ಜನ್ ಸ್ವಾಗತಿಸಿದರು ಮಾಹಂತೇಶ್ ಗಿಂಡಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here