ಸರ್ವೋಚ್ಚ ನ್ಯಾಯಾಲಯದ ತೀರ್ಪು ನಿರಾಶಾದಾಯಕ!

0
66

ಕಲಬುರಗಿ: ಮೂರು ಕರಾಳ ಕೃಷಿ ಕಾಯಿದೆಗಳ ಮತ್ತು ವಿದ್ಯುಚ್ಛಕ್ತಿ ತಿದ್ದುಪಡಿ ಕಾಯಿದೆಯ ವಾಪಸಾತಿಗಾಗಿ ದೇಶದ ರೈತರು ನಡೆಸುತ್ತಿರುವ ಹೋರಾಟಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ನೀಡಿರುವ ತೀರ್ಪು ಸಂಪೂರ್ಣ ನಿರಾಶಾದಾಯಕ ಹಾಗೂ ಈ ಹೋರಾಟಕ್ಕೆ ಮಾರಕವಾಗಿದೆ ಎಂದು ಎಸ್.ಯು.ಸಿ.ಐ(ಸಿ ಜಿಲ್ಲಾ ಕಾರ್ಯದರ್ಶಿ ಎಚ್. ವಿ. ದಿವಾಕರ್ ಹೇಳಿದ್ದಾರೆ.

ಈ ಕುರಿತು ತಮ್ಮ ಹೇಳಿಕೆ ನೀಡಿರುವ ಅವರು, ತಮ್ಮ ಹೋರಾಟವನ್ನು ಮುಂದುವರಿಸುವ ರೈತರ ತೀರ್ಮಾನಕ್ಕೆ ಬೆಂಬಲ ವ್ಯಕ್ತಪಡಿಸುತ್ತಾ, ಕೇಂದ್ರ ಬಿಜೆಪಿ ಸರ್ಕಾರದ ಕಾರ್ಪೊರೇಟ್ ಸೇವೆಗೈಯ್ಯುವ ನೀತಿಗಳನ್ನು ಸೋಲಿಸಲು ದೇಶದ ಮಿಲಿಯಾಂತರ ಶೋಷಿತ ಜನತೆ ಮುಂದಾಗಬೇಕೆಂದು ಎಸ್.ಯು.ಸಿ.ಐ. ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಸಮಿತಿ ಈ ಮೂಲಕ ಕರೆ ನೀಡಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here