Monday, July 15, 2024
ಮನೆಬಿಸಿ ಬಿಸಿ ಸುದ್ದಿಹರ್ಷಾನಂದ ಗುತ್ತೇದಾರ ಜನ್ಮದಿನ ಪ್ರಯುಕ್ತ ಹಣ್ಣು ವಿತರಣೆ

ಹರ್ಷಾನಂದ ಗುತ್ತೇದಾರ ಜನ್ಮದಿನ ಪ್ರಯುಕ್ತ ಹಣ್ಣು ವಿತರಣೆ

ಕಲಬುರಗಿ: ಜಿಲ್ಲೆಯ ಆಳಂದ ತಾಲೂಕಿನ ಖಜೂರಿ ಜಿಲ್ಲಾ ಪಂಚಾಯತ ಸದಸ್ಯರಾದ ಶ್ರೀ ಹರ್ಷಾನಂದ ಎಸ್ ಗುತ್ತೇದಾರ ಅವರ ೪೦ನೇ ಜನ್ಮ ದಿನದ ಅಂಗವಾಗಿ ಆಳಂದ ಮಂಡಲ ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ ಅಧ್ಯಕ್ಷ ಕುಮಾರ ಎಸ್ ಬಂಡೆ ಅವರು ಉಮರ್ಗಾ ಸಮೀಪವಿರುವ ವೃದ್ಧಾಶ್ರಮಕ್ಕೆ ತೆರಳಿ ಅಲ್ಲಿರುವ ಹಿರಿಯ ನಾಗರಿಕರಿಗೆ ಹಣ್ಣು ಹಂಪಲು ವಿತರಿಸಿದರು.

ನೊಂದ ಜೀವಗಳ ಜೊತೆ ನಾವಿದ್ದೇವೆ ಎಂದು ಭರವಸೆ ನೀಡಿದರು. ಹಿರಿಯರು ನಮ್ಮ ಸಮಾಜದ ಆಸ್ತಿ ಅವರನ್ನು ನಮ್ಮ ಮನೆಯ ಸದಸ್ಯರಂತೆ ಭಾವಿಸೋಣ ಎಂದು ಭರವಸೆ ನೀಡಿದರು ಈ ಸಂದರ್ಭದಲ್ಲಿ ಸುಮೀತ ಕುಂದಗೂಳೆ, ವೀರೇಶ ಹಳ್ಳೆ, ಪ್ರಶಾಂತ ಆಲೂರೆ ಇದ್ದರು.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular