ಕಲಬುರಗಿ: ಬೆಂಗಳೂರಿನ ನಿತ್ಯೋತ್ಸವ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘ ಕೊಡ ಮಾಡುವ ಶಿಕ್ಷಣ ರತ್ನ ಪ್ರಶಸ್ತಿಗೆ ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಅತಿಥಿ ಉಪನ್ಯಾಸಕ ಡಾ. ಸಿದ್ಧಲಿಂಗ ದಬ್ಬಾ ಆಯ್ಕೆಯಾಗಿದ್ದಾರೆ.
ಡಾ. ದಬ್ಬಾ ಅವರ ಕಳೆದ 10 ವರ್ಷಗಳ ಕಾಲ ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರದ ಸೇವೆ ಪರಿಗಣಿಸಿ ಈ ಪ್ರಶಸ್ತಿ ಕೊಡ ಮಾಡಲಾಗಿದೆ ಎಂದು ನಿತ್ಯೋತ್ಸವ ಸಂಘದ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಭಂಟನಳ್ಳಿ ಗ್ರಾಮದ ಸಿದ್ಧಲಿಂಗ ದಬ್ಬಾ ಅವರು ಗುಲ್ಬರ್ಗ ವಿವಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಎಂ.ಎ. ಸ್ನಾತಕೊತ್ತರ ಪದವಿ ಪಡೆದುದಲ್ಲದೆ 2009ನೇ ಸಾಲಿನಲ್ಲಿ ಪಿಎಚ್.ಡಿ. ಪದವಿ ಕೂಡ ಪಡೆದಿದ್ದಾರೆ.
ಐನೆಲೆ ಕರಿಬಸವಾರ್ಯರು, ಸಾಹಿತ್ಯ ಸಂಭ್ರಮ ಸೇರಿಸಂತೆ ಹತ್ತಾರು ಪುಸ್ತಕಗಳನ್ನು ರಚಿಸಿದ್ದು, ಫೆ. 7ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇವರಿಗೆ ಶಿಕ್ಷಣ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು.