ಕಲಬುರಗಿ: ನಗರದ ಹೈಕೋರ್ಟ್ ಹತ್ತಿರ ಯೂನಿಯನ್ ಬ್ಯಾಂಕ್ ನ ರೀಜನಲ್ ಶಾಖೆ ಉದ್ಘಾಟನೆ ಕಾರ್ಯಕ್ರಮ 28 ರಂದು ಸಂಜೆ 5 ಗಂಟೆಗೆ ಜರುಗಲಿದೆ ಎಂದು ಶಾಖೆಯ ಮುಖ್ಯಾಧಿಕಾರಿ ಎಸ್.ಎನ್.ಲೋನಿ ಅವರು ತಿಳಿಸಿದ್ದಾರೆ.
ಬೆಂಗಳೂರಿನ ಎಫ್,ಜಿ.ಎಮ್.ಓ ಫೀಲ್ಡ್ ಜನರಲ್ ಮ್ಯಾನೇಜರ್ ಬಿ ಶ್ರೀನಿವಾಸ್ ರಾವ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಗುಲಬರ್ಗಾ ವಿಶ್ವ ವಿದ್ಯಾಲಯ ಕುಲಪತಿಗಳಾದ ಚಂದ್ರಕಾಂತ ಯಾತನೂರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶರಣ ಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ವಿಶೇಷ ಅತಿಥಿಯಾಗಿ ಆಗಮಿಸಲಿದ್ದಾರೆ ಎಂದು ಶಾಖೆಯ ಅಧಿಕಾರಿ ನಾರಾಯಣ ಟಿ.ಎ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.