ನಾಮಫಲಕ ತೆರವಿಗಾಗಿ ಸುರಪುರ ತಹಸೀಲ್ ಮುಂದೆ ಸತ್ಯಾಗ್ರಹ

1
50

ಸುರಪುರ: ತಾಲೂಕಿನ ದೇವಿಕೇರಾ ಗ್ರಾದಲ್ಲಿ ಹಾಕಲಾಗಿರುವ ಡಾ:ಬಾಬು ಜಗಜೀವನರಾಂ ಅವರ ನಾಮಫಲಕ ತೆರವುಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿ ಮನವಿ ಮಾಡಿದ ನಂತರ ಜಿಲ್ಲಾಧಿಕಾರಿಗಳು ನಾಮಫಲಕ ತೆರವಿಗಾಗಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಕ್ರಮಕ್ಕೆ ಸೂಚಿಸಿದರು ನಿರ್ಲಕ್ಷ್ಯ ತೋರಿರುವ ತಾಲೂಕು ಪಂಚಾಯತಿ ಇಒ ಹಾಗು ದೇವಿಕೇರಾ ಗ್ರಾಮ ಪಂಚಾಯತಿ ಪಿಡಿಒ ಅವರನ್ನು ಅಮಾನತ್ತುಗೊಳಿಸುವ ವರೆಗೆ ಸತ್ಯಾಗ್ರಹ ಮುಂದುವೆಯಲಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ ಬಣ) ತಾಲೂಕು ಸಂಚಾಲಕ ತಿಪ್ಪಣ್ಣ ಶೆಳ್ಳಗಿ ಮಾತನಾಡಿದರು.

ಎಸಿಸಿ ಕಾರ್ಖಾನೆ ವಿರುದ್ಧ ಸಿಡಿದೆದ್ದ ಲಾರಿ-ಟ್ರಾನ್ಸ್‌ಪೋರ್ಟ್ ಮಾಲೀಕರು: ಸಿಮೆಂಟ್ ಸಾಗಾಣಿಕೆ ತಡೆಯುವ ಎಚ್ಚರಿಕೆ

Contact Your\'s Advertisement; 9902492681

ನಗರದ ತಹಸೀಲ್ ಕಚೇರಿ ಮುಂದೆ ಹಮ್ಮಿಕೊಳ್ಳಲಾದ ಅಮರಣಾಂತ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿ,ತಾಲೂಕು ಪಂಚಾಯತಿ ಇಒ ಹಾಗು ಗ್ರಾಮ ಪಂಚಾಯತಿ ಪಿಡಿಒ ಅವರನ್ನು ಅಮಾನತ್ತು ಮಾಡಬೇಕು ಮತ್ತು ನಾಮಫಲಕ ತೆರವುಗೊಳಿಸಬೇಕು ಅಲ್ಲಿಯವರೆಗೂ ಸತ್ಯಾಗ್ರಹ ಮುಂದು ವರೆಯಲಿದೆ.ಅಲ್ಲದೆ ಕುಂಬಾರ ಪೇಟೆಯ ಅಂಬೇಡ್ಕರ್ ನಾಮಫಲಕದ ಬಳಿಯಲ್ಲಿನ ಇತರೆ ನಾಮಫಲಕಗಳನ್ನು ತೆರವುಗೊಳಿಸದ ನಗರಸಭೆ ಪೌರಾಯುಕ್ತರ ವಿರುಧ್ಧವು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.ಅಲ್ಲದೆ ೧೯ನೇ ತಾರೀಖಿನ ಒಳಗಾಗಿ ನಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ ಇದೇ ೧೯ನೇ ತಾರೀಖು ತಾಲೂಕು ಪಂಚಾಯತಿ ಕಚೇರಿಗೆ ಮುಳ್ಳು ಬೇಲಿ ಹಾಕಿ ಪ್ರತಿಭಟಿಸುವುದಾಗಿ ತಿಳಿಸಿದರು.

ನಿರುದ್ಯೋಗ ಸಮಸ್ಯೆ: ಎಐಡಿವೈಒ ಸಹಿ ಸಂಗ್ರಹ 18 ರಂದು

ಸತ್ಯಾಗ್ರಹದಲ್ಲಿ ಮುಖಂಡರಾದ ಭಾಗಪ್ಪ ಬಡಿಗೇರ ಮಹಾದೇವಪ್ಪ ಹೊಸ್ಮನಿ ಭೀಮರಾಯ ಮಹಾದೇವಪ್ಪ ಪೂಜಾರಿ ಸೋಮಲಿಂಗಪ್ಪ ಹೊಸ್ಮನಿ ಸಾಯಬಣ್ಣ ಹೊಸ್ಮನಿ ಮರೆಪ್ಪ ಪೂಜಾರಿ ಶಿವಪ್ಪ ಹೊಸ್ಮನಿ ಶಿವು ಸುರಪುರ ಹಣಮಂತ ಹೊಸ್ಮನಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here