ಸುರಪುರ:ತಾಲೂಕು ಪಂಚಾಯತ ಆವರಣದಲ್ಲಿ ವಿಕಲಚೇತನರ ತರಬೇತಿ ಉದ್ಯೋಗ ಶಿಬಿರ

1
44

ಸುರಪುರ: ತಾಲೂಕಾ ಪಂಚಾಯತ ಆವರಣದಲ್ಲಿ ದಿ. ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ (ಎ.ಪಿ.ಡಿ) ಸಂಸ್ಥೆ ಬೆಂಗಳೂರು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಯಾದಗಿರಿ ಮತ್ತು ತಾಲೂಕಾ ಪಂಚಾಯತ ಸುರಪುರ ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಿರುದ್ಯೋಗಿ ವಿಕಲಚೇತನರಿಗೆ ತರಬೇತಿ ಮತ್ತು ಉದ್ಯೋಗ ಆಯ್ಕೆ ಶಿಬಿರ ನಡೆಸಲಾಯಿತು.

ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ತಾಲೂಕಾ ಪಂಚಾಯತ ಯೋಜನಾ ಅಧಿಕಾರಿಗಳಾದ ಕುಮಲಯ್ಯ, ವಿಕಲಚೇತನರು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಮತ್ತು ಸ್ವಾಲಂಬನೆಗಳ ಜೀವನ ನಡೆಸುವುದರ ಜೊತೆಗೆ ಎ.ಪಿ.ಡಿ. ಸಂಸ್ಥೆಯಂತ ಸಹಕಾರದಿಂದ ಉದ್ಯೋಗ ಪಡೆದು ಇನ್ನೊಬ್ಬರಿಗೆ ಮಾದರಿಯಾಗುವಂತ ವ್ಯಕ್ತಿಗಳಾಗಿ ಬದಲಾಗಬೇಕೆಂದು ನುಡಿದರು. ಹಾಗೂ ಗ್ರಾಮ ಪಂಚಾಯತಿಮಟ್ಟದ ಶೇಕಡಾ ೫ ರಷ್ಟು ಅನುದಾನವನ್ನು ೧೫ನೇ ಹಣಕಾಸು ಯೋಜನೆಯಲ್ಲಿ ಹೊಸ ತಂತ್ರಜ್ಞಾನದಲ್ಲಿ ವಿಕಲಚೇತನರಿಗೆ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.

Contact Your\'s Advertisement; 9902492681

ರಾಷ್ಟ್ರೀಯ ಒಲಂಪಿಕ್ ಮಟ್ಟದ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ಬಹುಮಾನ ವಿತರಣೆ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ತಾಲೂಕಾ ವಿಕಲಚೇತನ ನೋಡಲ್ ಅಧಿಕಾರಿಗಳಾದ ಮೀನಾಕ್ಷಿ ಪಾಟೀಲ ಮಾತನಾಡಿ, ಎ.ಪಿ.ಡಿ. ಸಂಸ್ಥೆಯು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಸಾಕಾಷ್ಟು ವಿಕಲಚೇತನರಿಗೆ ಉದ್ಯೋಗಗಳನ್ನು ನೀಡಿದ್ದು ಅವರ ಕಾರ್ಯ ಶ್ಲಾಘನೀಯ ಎಂದು ನುಡಿದರು.

ಇದೇ ಸಂದರ್ಭದಲ್ಲಿ ವಿಕಲಚೇತನರ ಹಕ್ಕುಗಳ ಒಕ್ಕೂಟದ ವಿಭಾಗಿಯ ಅಧ್ಯಕ್ಷ ಹಾಗು ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಸಂಗನಗೌಡ ಧನರಡ್ಡಿ ಇವರಿಗೆ ಸನ್ಮಾನಿಸಿಗೌರವಿಸಲಾಯಿತು.ಇದೇ ಸಂದರ್ಭದಲ್ಲಿ ೧೦ ವಿಕಲಚೇತನ ಹಾಗೂ ಹಿರಿಯ ನಾಗರಿಕರಿಗೆ ಸಾಧನೆ ಸಲಕರಣೆ ವಿತರಿಸಲಾಯಿತು. ೬೦ಕ್ಕೂ ಅಧಿಕ ವಿಕಲಚೇತನರು ಉದ್ಯೋಗ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದರು.

15 ದಿನದಲ್ಲಿ ನೆರೆಯ ರಾಜ್ಯಗಳಿಂದ ಮರಳಿದವರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ

ಈ ಸಂದರ್ಭದಲಿ ವಿಕಲಚೇತನರ ಮುಖಂಡರಾದ ವಿಕಲಚೇತನರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬೈರಿಮರಡಿ,ತಾಲೂಕು ಅಧ್ಯಕ್ಷ ನಾಗೇಂದ್ರ ದೊರಿ ಚಂದಲಾಪೂರ, ಎಪಿ.ಡಿ. ಸಂಸ್ಥೆಯ ಅಧಿಕಾರಿಗಳಾದ ಶಿವಯೋಗಿ ಗುಲಬರ್ಗಾ, ಶ್ರೀಧರ ಮಂಗಳೂರು ಎಮ್.ಆರ್.ಡಬ್ಲ್ಯೂ, ಮಾಳಪ್ಪ ಪೂಜಾರಿ, ದೇವಿಂದ್ರಪ್ಪ ಬಾಚಿಮಟ್ಟಿ ಉಪಾಧ್ಯಕ್ಷರು, ಶರಣಯ್ಯಸ್ವಾಮಿ ದೇವಪುರ, ಪ್ರದೀಪಗೌಡ ಪಾಟೀಲ, ಶಂಕ್ರಯ್ಯಸ್ವಾಮಿ ಸಹ ಕಾರ್ಯದರ್ಶಿ, ಸಿದ್ದಪ್ಪ ಅರಿಕೇರಿ ಸ್ವಾಗತಿಸಿದರು, ರೇಣುಕಾ ಪಾಟೀಲ ಪ್ರಾರ್ಥಿಸಿದರು, ದೊಡ್ಡಪ್ಪಗೌಡ ನಾಗರಾಳ ನಿರೂಪಿಸಿದರು, ಮರಲಿಂಗಪ್ಪ ಚಂದ್ಲಾಪುರ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here