ಗುಡಿಸಲು ಸುಟ್ಟು ಸಂತ್ರಸ್ತಗೊಂಡ ಕುಟುಂಬಕ್ಕೆ ಸ್ಥಳಿಯ ಮುಖಂಡರ ನೆರವು

0
36

ಸುರಪುರ: ತಾಲೂಕಿನ ದೇವರಗೋನಾಲ ಗ್ರಾಮದಲ್ಲಿ ಕಳೆದ ಎರಡು ದಿನಗಳ ಹಿಂದೆ ಆಕಸ್ಮಿಕವಾಗಿ ಬೆಂಕಿ ಬಿದ್ದು ದೇವಿಂದ್ರಪ್ಪ ಕನ್ನೆಳ್ಳಿ ಎಂಬುವವರ ಗುಡಿಸಲು ಸುಟ್ಟು ನಗದು ಹಾಗು ಅಗತ್ಯ ವಸ್ತುಗಳು ಸುಟ್ಟು ತೊಂದರೆಗೀಡಾಗಿದ್ದ ಕುಟುಂಬಕ್ಕೆ ಸ್ಥಳಿಯ ಮುಖಂಡರು ಭೇಟಿ ಮಾಡಿ ಸಾಂತ್ವನ ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ವೆಂಕಟೇಶ ಬೇಟೆಗಾರ ಮಾತನಾಡಿ,ದೇವಿಂದ್ರಪ್ಪ ಕನ್ನೆಳ್ಳಿಯವರ ಕುಟುಂಬವು ತೀರಾ ಬಡತನದ ಕುಟುಂಬವಾಗಿದ್ದು ಗುಡಿಸಲಲ್ಲಿ ಜೀವನ ನಡೆಸುತ್ತಿದ್ದರು,ಆದರೆ ಈಗ ಆಕಸ್ಮಿಕವಾಗಿ ಬೆಂಕಿ ತಗುಲಿ ಗುಡಿಸಲು ಸುಟ್ಟುಹೋಗಿದ್ದರಿಂದ ಕುಟುಂಬ ಈಗ ಬೀದಿಗೆ ಬಿದ್ದಂತಾಗಿದೆ.ಆದ್ದರಿಂದ ಈ ಕುಟುಂಬಕ್ಕೆ ಮುಂಬರುವ ದಿನಗಳಲ್ಲಿ ಗ್ರಾಮ ಪಂಚಾಯತಿಯಿಂದ ಆಶ್ರಯ ಯೋಜನೆಯಡಿ ಮನೆಯನ್ನು ಒದಗಿಸುವಂತೆ ಮನವಿ ಮಾಡಿದರು.ಅಲ್ಲದೆ ಗ್ರಾಮ ಪಂಚಾಯತಿ ಅಧ್ಯಕ್ಷರು ಭರವಸೆಯನ್ನು ನೀಡಿದರು.

Contact Your\'s Advertisement; 9902492681

ಸಾಹಿತ್ಯ ಪರಿಷತ್ ಭವನ ನಿರ್ಮಾಣಕ್ಕೆ ನಿವೇಶನ ಒದಗಿಸಲು ಮನವಿ

ಅಲ್ಲದೆ ಇದೇ ಸಂದರ್ಭದಲ್ಲಿ ಸಂತ್ರಸ್ತ ಕುಟುಂಬಕ್ಕೆ ಅಗತ್ಯ ವಸ್ತುಗಳಾದ ಅಕ್ಕಿ ಬೇಳೆ ಸಕ್ಕರೆ ಎಣ್ಣೆ ಎಲ್ಲಾ ದಿನಸಿ ಪದಾರ್ಥಗಳನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಸ್ಥಳಿಯ ಗ್ರಾಮ ಪಂಚಾಯತಿ ಸದಸ್ಯ ಭೀಮಣ್ಣ ದೀವಳಗುಡ್ಡ ಮುಖಂಡರಾದ ದೇವಿಂದ್ರಪ್ಪ ಚಿಕ್ಕನಹಳ್ಳಿ ನಾಗಪ್ಪ ಕನ್ನೆಳ್ಳಿ ಮಾರ್ಥಂಡಪ್ಪ ದೊರಿ ನಿಂಗು ಕಿರದಹಳ್ಳಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here