ಭಾವೈಕ್ಯದ ಬೀಡು ಸಗರನಾಡು:ಕಸಾಪ ಅಧ್ಯಕ್ಷ ಶ್ರೀನಿವಾಸ ಜಾಲವಾದಿ

0
62

ಸುರಪುರ: ನಗರದ ವೆಂಕಟಾಪುರದ ಹತ್ತಿರವಿರುವ ಸೈಯ್ಯದ್ ಬುರಾನುದ್ದೀನ್ ಷಾ ಖಾದರಿ ದರ್ಗಾ ಆವರಣದಲ್ಲಿ ಎಸ್ ಎಸ್ ಎಲ್ ಸಿ ಅತಿ ಹೆಚ್ಚು ಅಂಕಗಳಿಸಿರುವ ಉರ್ದು ಮಾಧ್ಯಮದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕಸಾಪ ತಾಲೂಕು ಅಧ್ಯಕ್ಷ ಶ್ರೀನಿವಾಸ ಜಾಲವಾದಿಯವರು ಸಗರನಾಡು ಭಾವೈಕ್ಯದ ಬೀಡು, ಶರಣರು ಸೂಫಿಗಳು ನೆಲೆಸಿರುವ ಈ ನಾಡು ಶಾಂತಿಯ ಬೀಡಾಗಿದೆ. ಇಂದು ಶಿಕ್ಷಣ ಪ್ರತಿಯೊಬ್ಬರಿಗೂ ಅವಶ್ಯಕವಾದುದು ಅದರಲ್ಲೂ ಮಹಿಳೆಯರು ಶಿಕ್ಷಣ ಪಡೆದುಕೊಂಡರೆ ಅವರ ಇಡೀ ಕುಟುಂಬವು ಉತ್ತಮವಾಗುವುದು ಎಂದು ಅಭಿಪ್ರಾಯಪಟ್ಟರು. ನಾನಾ ಹಜರತ ರವರ ನಿಯಾಜ ಪ್ರಯುಕ್ತ ಎಸ್ ಎಸ್ ಎಲ್ ಸಿ ಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಯರಿಗೆ ಸನ್ಮಾನಿಸಿ ಗೌರವಿಸಿರುವುದು ಶ್ಲಾಘನೀಯ ಎಂದರು .

Contact Your\'s Advertisement; 9902492681

ಗ್ರಾಪಂ ಲಕ್ಷಾಂತರ ಹಣ ದುರ್ಬಳಕ್ಕೆ ಖಂಡಿಸಿ ಅನಿರ್ದಿಷ್ಟಾವಧಿ ಧರಣಿ 2ನೇ ದಿನಕ್ಕೆ

ಶೋಷಿತರ ಒಕ್ಕೂಟದ ಅಧ್ಯಕ್ಷರಾದ ವೆಂಕೋಬ ದೊರೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು . ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಜರತ್ ಸೈಯದ್ ಇರ್ಫಾನ್ ಅಲಿ ಷಾ ಖಾದರಿ  ಎಜಾಜಿ ಮಾರೂಫ ಸಯ್ಯದ್ಯ  ಆಬಿದ ಅಹ್ಮದ್  ವಹಿಸಿಕೊಂಡಿದ್ದರು. ಮರುನ್ನೀಸಾ ಮರಿಯಾ ಬೇಗಮ್ ನಾಜಿಯಾ ಸಿಮ್ರಾನ್ ಫಾತಿಮಾ ಝಹೀರಾ ಮುಖ್ಯಗುರು ಸಾಯಿರಾಬಾನು ಕಾರ್ಯಕ್ರಮದ ವೇದಿಕೆಯಲ್ಲಿದ್ದರು.

ಕಾರ್ಯಕ್ರಮದಲ್ಲಿ ತೌಫಿಕ ಅಹ್ಮದ್ ಅರಕೇರಿ ಇಕ್ಬಾಲ್ ಸೌದಾಗರ್ ಡಾ.ಸಯ್ಯದ್, ಡಾ ಸಯ್ಯದ್ ಅಲಿ ಸಯ್ಯದ್   ಜಾಕೀರ ಅಹ್ಮದ್    ರಾಘವೇಂದ್ರ ಭಕ್ರಿ  ಮೌಲಾಲಿ ಸೌದಾಗರ್ ಯಾಸಿನ್ ಅಹಮದ್ ಸೌದಾಗರ್ ಮಹಿಬೂಬ್ ಗುಲ್ಬರ್ಗ ಇಮ್ತಿಯಾಜ್ ಭಾಗವಹಿಸಿದ್ದರು ಅನ್ವರ್ ಜಮಾದರ್ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here