ಸಮಾನತೆ ಸಮಾಜ ನಿರ್ಮಾಣಕ್ಕೆ ಜಾತಿ ನಾಶಕ್ಕೆ ಕರೆ

0
50
ಚಿತ್ರ ಶಿರ್ಷಿಕೆ: ಸೇಡಂ ತಾಲೂಕಿನ ಹೊಡಾ ಗ್ರಾಮದ ಜವಾಹರ ನಗರದಲ್ಲಿ ಏರ್ಪಡಿಸಿದ ಅಸ್ಪೃಶ್ಯತೆ ನಿರ್ಮೂಲನೆಯ ವಿಚಾರ ಸಂಕಿರಣ ಕಾರ್ಯಕ್ರಮಕ್ಕೆ ಗ್ರಾಪಂ ಸದಸ್ಯೆ ಮಲ್ಲಮ್ಮ ಗುತ್ತೇದಾರ ಉದ್ಘಾಟಿಸಿದರು. ಧರ್ಮಣ್ಣ ಧನ್ನಿ, ಅಪ್ಸನಾ ಬೇಗಂ, ವಿಠ್ಠಲ ಚಿಕಣಿ ಇತರರಿದ್ದಾರೆ. ಅಸ್ಪೃಶ್ಯತೆ ನಿರ್ಮೂಲನಾ ವಿಚಾರ ಸಂಕಿರಣ

ಸೇಡಂ: ಬಸವಾದಿ ಶರಣರು, ಸೂಫಿ ಸಂತರು ಹಾಗೂ ದೇಶದ ಮಹಾ ಪುರುಷರು ಕನಸು ಕಂಡ ಸಮಾನತೆಯ ಸಮಾಜ ನಿರ್ಮಾಣಕ್ಕೆ ಜಾತಿ ಪದ್ಧತಿಯನ್ನು ನಾಶ ಪಡಿಸಬೇಕಾಗಿದೆ ಎಂದು ಸಾಹಿತಿ, ಪತ್ರಕರ್ತ ಧರ್ಮಣ್ಣ ಎಚ್ ಧನ್ನಿ ಅವರು ಕರೆ ನೀಡಿದರು.

ತಾಲೂಕಿನ ಹೊಡಾ ಗ್ರಾಮದ ಜವಾಹರ ನಗರದಲ್ಲಿ ಮಾಯಾ ವೆಲಫರ್ ಸೂಸೈಟಿ ಹಾಗೂ ತಾಲೂಕಾ ಸಮಾಜ ಕಲ್ಯಾಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಅಸ್ಪೃಶ್ಯತೆ ನಿರ್ಮೂಲನೆಯ ವಿಚಾರ ಸಂಕಿರಣ ಕಾರ್ಯಕ್ರಮ ಉಪನ್ಯಾಸ ಭಾಷಣ ಮಂಡಿಸಿ ಮಾತನಾಡಿದರು.

Contact Your\'s Advertisement; 9902492681

ಗ್ರಾಪಂ ಅವ್ಯವಹಾರ ಕ್ರಮಕ್ಕೆ

ಆಧುನಿಕ ಕಾಲ ಘಟ್ಟದಲ್ಲೂ ಗ್ರಾಮೀಣ ಇನ್ನು ಜಾತಿ ಪದ್ಧತಿ ಆಚರಣೆಯಲ್ಲಿದೆ. ದೈಹಿಕ ಅಸ್ಪೃಶ್ಯತೆ ಇಲ್ಲದಿದ್ದರೂ ಮಾನಸಿಕ ಅಸ್ಪೃಶ್ಯತೆ ಹೆಚ್ಚುತ್ತಿದೆ ಎಂದು ಅವರು ಕಳವಳ ವ್ಯಕ್ತ ಪಡಿಸಿದ ಅವರು, ಜಾತಿ ವಿನಾಶದ ಬಗ್ಗೆ ಗ್ರಾಮೀಣ ಜನರಲ್ಲಿ ಜಾಗೃತಿ ಕಾರ್ಯಗಳಲ್ಲಿ ಚುರುಕುಗೊಳಿಸಬೇಕಾಗಿದೆ. ನಾವೇಲ್ಲ ಒಂದೆಂಬ ಮನೋಭಾವ ಬೆಳೆದಾಗಲೇ ಅಸ್ಪೃಶ್ಯತೆ ಅಳಿಸಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.
ಸಂಸ್ಕಾರ ಪ್ರತಿಷ್ಠಾನದ ನಿರ್ದೇಶಕ ವಿಠ್ಠಲ ಚಿಕಣಿ ಮಾತನಾಡಿ, ನಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಪಾಲಕರು ಮುಂದಾಗಬೇಕು. ಆ ಮೂಲಕ ಸಮಾಜದ ಅನಿಷ್ಠ ಪದ್ಧತಿಗಳಿಗೆ ಕಡಿವಾಣ ಹಾಕಬಹುದು. ಸರ್ಕಾರದ ಈ ಕಾರ್ಯಕ್ಕೆ ಎಲ್ಲರು ಕೈ ಜೋಡಿಸಬೇಕು ಎಂದರು.

ಮಾಯಾ ವೆಲಫರ್ ಸೂಸೈಟಿಯ ಅಧ್ಯಕ್ಷ ವೀರಣ್ಣ ಬೆಣ್ಣೆಶಿರೂರ ಅಧ್ಯಕ್ಷತೆ ವಹಿಸಿ, ಸಮಾಜದಲ್ಲಿ ಕೆಟ್ಟ ಆಚರಣೆಗಳ ವಿರುದ್ಧ ಜನ ಜಾಗೃತಿ ಮುಖ್ಯ. ಅಸ್ಪೃಶ್ಯತೆ ಅಳಿಸಿ ಸಮಾನತೆಡ ಬೆಳಿಸುವಂತೆ ತಿಳಿಸಿದರು. ಶಿಕ್ಷಕ ಭೀಮಾಶಂಕರ ಗುತ್ತೇದಾರ ಅವರು ಪ್ರಾಸ್ತಾವಿಕವಾಗಿ ಮಾತಾಡಿದರು.

ಗ್ರಾಮ ಪಂಚಾಯತನಲ್ಲಿ ಸಮುದಾಯ ವಂತಿಕೆ ಸಂಗ್ರಹಣಾ ಅಭಿಯಾನ

ಗ್ರಾಪಂ ಸದಸ್ಯೆ ಅಪ್ಸನಾ ಬೇಗಂ ಶಿರಾಜೋದ್ದೀನ್, ಎಸ್‌ಡಿಎಂಸಿ ಅಧ್ಯಕ್ಷ ಶಂಕರ ಚಿತ್ತಾಪೂರ, ಮಾಜಿ ಅಧ್ಯಕ್ಷ ಬಾಬು ಸ್ವಾಮಿ, ಮುಖಂಡರಾದ ಮಲ್ಲೇಶಿ ಮಿಸ್ತ್ರೀ, ರಮೇಶ ಕಡಗಂಚಿ, ನಾಮದೇವ ಗುತ್ತೇದಾರ ಅಂಗನವಾಡಿ ಕಾರ್ಯಕರ್ತೆ ಶಾಂತಾ ಶಿವಶರಣಪ್ಪ, ಆಶಾ ಕಾರ್ಯಕರ್ತೆ ಸುನೀತಾ ಯಲ್ಲಪ್ಪ, ಮಹಿಳಾ ಸಂಘದ ಉಪಾಧ್ಯಕ್ಷೆ ಯಲ್ಲಮ್ಮ, ಪೀರಪ್ಪ ಹಾದಿಮನಿ ಸೇರಿದಂತೆ ಬಡಾವಣೆಯ ಮುಖಂಡರು ಪಾಲ್ಗೊಂಡಿದರು. ನಂತರ ಶರಣರ ವಚನ ಗಾಯನ ನಡೆಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here