ಕಲಬುರಗಿ :ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ನಿರಂತರವಾಗಿ ಆಗುತ್ತಿರುವ ಅನ್ಯಾಯ ಮತ್ತು ಮಲತಾಯಿ ಧೋರಣೆಯನ್ನು ಪ್ರತಿಭಟಿಸಿ ಸಮಿತಿ ಮೊದಲನೆಯ ಹಂತವಾಗಿ ಹಮ್ಮಿಕೊಂಡ ಹೋರಾಟದಂತೆ ಕಲ್ಯಾಣ ಮಾಡಿ ಇಲ್ಲವೆ ಪ್ರತ್ಯೇಕ ರಾಜ್ಯ ಕೊಡಿ ಎಂಬ ಘೋಷಣೆಗೆ ಪ್ರತೀಕವಾಗಿ ಸರಕಾರದ ಮೇಲೆ ಒತ್ತಡ ತರಲು ಕಲ್ಯಾಣ ನಡೆ ಜನಪ್ರತಿನಿಧಿಗಳ ಕಡೆ ಎಂಬ ಅಭಿಯಾದಂತೆ ಇಂದು ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರ ನೇತೃತ್ವದಲ್ಲಿ ವಿಧಾನ ಪರಿಷತ್ ಸದಸ್ಯರಾದ ಶಶೀಲ ನಮೋಶಿಯವರ ನಿವಾಸಕ್ಕೆ ಭೇಟಿ ಕೊಟ್ಟು ಕಲ್ಯಾಣ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ ಮಲತಾಯಿ ಧೋರಣೆಯ ಬಗ್ಗೆ ವಿವರವಾಗಿ ಚರ್ಚಿಸಲಾಯಿತು.
ಪಕ್ಷಾತೀತ ಧೋರಣೆಯಂತೆ ಸಮಿತಿ ಹಮ್ಮಿಕೊಂಡಿರುವ ಈ ಅಭಿಯಾನಕ್ಕೆ ಸ್ಪಂದಿಸಲು ವಿಧಾನ ಪರಿಷತ್ ಸದಸ್ಯರಾದ ನಮೋಶಿಯವರಿಗೆ ಅಗ್ರಹಿಸಿ ಅವರಿಗೆ ಸಂಬಂಧಪಟ್ಟ ಅಂಶಗಳ ವಿವರವಾದ ಮನವಿ ಪತ್ರವನ್ನು ಸಲ್ಲಿಸಲಾಯಿತು.
ನಮೋಶಿಯವರ ನಿವಾಸದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ನಡೆದ ದುಂಡು ಮೇಜಿನ ಸಭೆಯಲ್ಲಿ ಸಮಿತಿಯ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ಅವರು ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ತಮಗೂ ಮನವರಿಕೆಯಾಗಿದೆ. ಇದಕ್ಕೆ ನಾವೆಲ್ಲಾ ಜನಪ್ರತಿನಿಧಿಗಳು ಒಗ್ಗಟ್ಟಾಗಿ ರಾಜಕಿಯ ಇಚ್ಛಾಶಕ್ತಿ ಪ್ರದರ್ಶಿಸುತ್ತೇವೆ.
ಮೀನು ಹಿಡಿಯಲು ಹೋದ ತಂದೆ ಮಗ ನೀರು ಪಾಲು
ಈಗಾಗಲೇ ಸಂಬಂಧಿಸಿದ ೩೭೧ನೇ(ಜೆ) ಕಲಮಿನ ದೋಷಗಳ ಬಗ್ಗೆ ತಾವು ಸೇರಿದಂತೆ ಅನೇಕ ಶಾಸಕರು ಮುಖ್ಯಮಂತ್ರಿಗಳಿಗೆ ಭೇಟಿಯಾಗಿದ್ದು, ಅದರಂತೆ ೩೭೧ನೆ (ಜೆ) ಕಲಮಿನಲ್ಲಿರುವ ದೋಷಗಳ ಬಗ್ಗೆ ಸಭೆ ನಡೆಸಲು ಮುಖ್ಯಮಂತ್ರಿಗಳಿಂದ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಮನವರಿಕೆ ಮಾಡಿ ಆದಷ್ಟು ಶೀಘ್ರ ಅಧಿಕಾರಿಗಳ ಮಟ್ಟದಲ್ಲಿ ಸಭೆ ನಡೆಸುವ ಬಗ್ಗೆ ದಿನಾಂಕ ನಿಗದಿ ಮಾಡುವ ಕುರಿತು ನಿರಂತರ ಒತ್ತಡ ತರುತ್ತೇವೆ. ಸಮಿತಿ ಹಮ್ಮಿಕೊಂಡಿರುವ ಅಭಿಯಾನಕ್ಕೆ ತಾವು ಬದ್ಧರಿರುವದಾಗಿ ಭರವಸೆ ನೀಡಿದರು.
ಈ ಅಭಿಯಾನದಲ್ಲಿ ಸಮಿತಿಯ ಮುಖಂಡರುಗಳಾದ ಮನೀಷ ಜಾಜು, ಲಿಂಗರಾಜ ಸಿರಗಾಪೂರ, ಶಿವಲಿಂಗಪ್ಪ ಬಂಡಕ್, ಮಹಮ್ಮದ ಮಿರಾಜೊದ್ದೀನ್, ಜ್ಞಾನಮಿತ್ರ ಸ್ಯಮ್ಯುವೆಲ್, ಅಬ್ದುಲ ರಹೀಮ್, ಬಾಬಾ ಫಕ್ರೋದ್ದೀನ್, ವೀರೇಶ ಪುರಾಣಿಕ, ಶಿವಾನಂದ ಕಾಂದೆ, ಶ್ರೀಧರ ಪಾಟೀಲ್, ರಾಮಶೆಟ್ಟಿ, ಶರಣಪ್ಪ ಎಸ್. ಸಂಧ್ಯಾರಾಜ ಸ್ಯಾಮ್ಯುವೆಲ್, ಸುರೇಶ ಸೇರಿದಂತೆ ಇತರರು ಇದ್ದರು.