ಕಲ್ಯಾಣ ಕರ್ನಾಟಕ ಭಾಗದ ಅಭ್ಯಾರ್ಥಿಯಾದ ನನಗೆ ಮತ ನೀಡಿ: ಶೇಖರಗೌಡ ಮಾಲಿಪಾಟೀಲ್

0
39

ಸುರಪುರ: ಹಿಂದಿನಿಂದಲೂ ಕಲ್ಯಾಣ ಕರ್ನಾಟಕ ಭಾಗಕ್ಕೆ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷಸ್ಥಾನ ಲಭಿಸಿಲ್ಲ,ಆದ್ದರಿಂದ ಈಬಾರಿ ನಾನು ಅಧ್ಯಕ್ಷ ಆಕಾಂಕ್ಷಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ನನಗೆ ಮತ ನೀಡುವಂತೆ ಶೇಖರಗೌಡ ಮಾಲಿಪಾಟೀಲ್ ಮನವಿ ಮಾಡಿದ್ದರು.

ಕನ್ನಡ ಸಾಹಿತ್ಯ ಸಂಘ ಸುರಪುರ ಅಧ್ಯಕ್ಷರಾದ ಬಸವರಾಜ ಜಮದ್ರಖಾನಿಯವರ ಮನೆಯಲ್ಲಿ ಸಭೆ ನಡೆಸಿ ಅನೇಕ ಸಾಹಿತಿ ಹಾಗು ಸಾಹಿತ್ಯಾಸಕ್ತರಿಗೆ ಭೇಟಿ ಮಾಡಿ ಮಾತನಾಡಿ,ರಾಜ್ಯದಲ್ಲಿನ ಕನ್ನಡ ಸಾಹಿತ್ಯ ಸಾಂಸ್ಕೃತಿ ಕಲೆ ಬೆಳವಣಿಗೆಗೆ ಅನೇಕ ಯೋಜನೆಗಳನ್ನು ಹೊಂದಿದ್ದು ಅವುಗಳನ್ನು ಜಾರಿಗೊಳಿಸಲು ತಾವೆಲ್ಲರು ಬೆಂಬಲಿಸುವುದು ಅವಶ್ಯಕವಾಗಿದೆ.ಆದ್ದರಿಂದ ತಮ್ಮಲ್ಲಿ ಮನವಿ ಮಾಡುತ್ತಿದ್ದು ತಾವೆಲ್ಲರು ಮೇ ೦೯ ರಂದು ನಡೆಯುವ ಚುನಾವಣೆಯಲ್ಲಿ ನನಗೆ ಮತ ನೀಡುವಂತೆ ಯಾಚಿಸಿದರು.

Contact Your\'s Advertisement; 9902492681

ಭೀಮ ರತ್ನ ರಾಜ್ಯ ಪ್ರಶಸ್ತಿ ಸ್ವೀಕರಿಸಿದ ಹಣಮಂತ ಇಟಗಿಗೆ ಸನ್ಮಾನ಻

ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ ಮಾತನಾಡಿ,ನಮ್ಮ ಭಾಗಕ್ಕೆ ಕನ್ನಡ ಸಾಹಿತ್ಯ ಪರಿಷತ್‌ನ ಪ್ರಾತಿನಿಧಿಕತೆ ಸಿಗಬೇಕಾಗಿರುವುದು ಮುಖ್ಯವಾಗಿದೆ.ಆದ್ದರಿಂದ ಎಲ್ಲರು ಈಬಾರಿ ಶೇಖರಗೌಡ ಮಾಲಿಪಾಟೀಲ್ ಅವರಿಗೆ ಬೆಂಬಲಿಸೋಣ ಎಂದರು.ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀನಿವಾಸ ಜಾಲವಾದಿ ಮಾತನಾಡಿದರು.

ಈ ಸಂದರ್ಭದಲ್ಲಿ ಕಸಾಪ ಬೆಂಗಳೂರು ನಗರ ನಿಕಟಪೂರ್ವ ಕಾರ್ಯದರ್ಶಿ ಶಿವಪ್ರಸಾದ ಚುಟುಕು ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಬೀರಣ್ಣ ಬಿ.ಕೆ,ತಾಲೂಕು ಕಸಾಪ ಗೌರವ ಕಾರ್ಯದರ್ಶಿಗಳಾದ ರಾಜಶೇಖರ ದೇಸಾಯಿ ದೇವು ಹೆಬ್ಬಾಳ ವೆಂಕಟೇಶಗೌಡ ಮುದ್ದಪ್ಪ ಅಪ್ಪಾಗೋಳ ರಾಘವೇಂದ್ರ ಭಕ್ರಿ ಮಹಾದೇವಪ್ಪ ಗುತ್ತೇದಾರ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here