ಜಿ.ವೆಂಕಟಸುಬ್ಬಯ್ಯ, ಎಲ್.ಬಿ.ಕೆ. ಆಲ್ದಾಳರು ಮರೆಯಲಾಗದ ಮಹಾನುಭವರು: ಡಾ. ಸತ್ಯಂಪೇಟೆ

0
52

ಕಲಬುರಗಿ: ಶಬ್ದ ಸಹಾಯವಾಣಿ ಎಂದೇ ಪ್ರಖ್ಯಾತರಾಗಿದ್ದ ಜಿ. ವೆಂಕಟಸುಬ್ಬಯ್ಯ ಹಾಗೂ ನಾಟಕದ ಮಾಸ್ತರ್ ಎಂದೇ ಖ್ಯಾತನಾಮರಾಗಿದ್ದ ಎಲ್.ಬಿ.ಕೆ. ಆಲ್ದಾಳ ಅವರ ನಿಧನದಿಂದಾಗಿ ಕನ್ನಡ ಸಾರಸತ್ಬ ಲೋಕ ಬಡವಾಗಿದೆ ಎಂದು ಪತ್ರಕರ್ತ- ಸಾಹಿತಿ ಡಾ. ಶಿವರಂಜನ್ ಸತ್ಯಂಪೇಟೆ ಅಭಿಪ್ರಾಯಪಟ್ಟರು.

ಕರ್ನಾಟಕ ರಕ್ಷಣಾ ವೇದಿಕೆ ( ಎಚ್. ಶಿವರಾಮೇಗೌಡ ಬಣ) ವತಿಯಿಂದ ನಗರದ ಸರ್ವಜ್ಞ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಜಿ.ವಿ. ಹಾಗೂ ಎಲ್.ಬಿ.ಕೆ. ಅವರ ಕುರಿತು ಮಾತನಾಡಿ, ಸಾಧಕರ ಬದುಕು ನಮ್ಮದಾಗಬೇಕು ಎಂದು ಕರೆ ನೀಡಿದರು.

Contact Your\'s Advertisement; 9902492681

ಕಲ್ಯಾಣ ನಡೆಗೆ ತಾತ್ಕಾಲಿಕ ಬ್ರೆಕ್, ಕೊರೊನಾ ವಿರುದ್ಧ ಅಭಿಯಾನ ಶುರು

ಗುಂಜಾಮ್ ವೆಂಕಟಸುಬ್ಬಯ್ಯ ಹಾಗೂ ಲಾಲ್ ಮಹ್ಮದ್ ಬಂದೇನವಾಜ್ ಖಲೀಫ್ ಅವರು ಪದಕೋಶ ಹಾಗೂ ನಾಟಕ ಕ್ಷೇತ್ರದಲ್ಲಿ ಗಣನೀಯ ಪ್ರಮಾಣದ ಸೇವೆ ಸಲ್ಲಿಸಿದ್ದರಿಂದಲೇ ಅವರನ್ನು ಇಂದು ಸ್ಮರಿಸಲಾಗುತ್ತಿದ್ದು, ಈ ಇಬ್ಬರೂ ಮಹನೀಯರು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ಮಹದುಪಕಾರ ಮಾಡಿದ್ದಾರೆ ಎಂದು ತಿಳಿಸಿದರು.

ಅಪರಿಮಿತ ಜೀವನೋತ್ಸಾಹ, ಓದು, ಬರಹವನ್ನೇ ತಮ್ಮ ಜೀವನದ ಉಸಿರಾಗಿಸಿಕೊಂಡ ಈ ಮಹನೀಯರು, ಮರೆಯಲಾಗದ ಮಹಾನುಭವರು ಎಂದು ಅವರ ವ್ಯಕ್ತಿತ್ವವನ್ನು ಬಣ್ಣಿಸಿದರು.

ಎಲ್.ಬಿ.ಕೆ. ಆಲ್ದಾಳ, ಜಿ. ವೆಂಕಟಸುಬ್ಬಯ್ಯ ಅವರಿಗೆ ನುಡಿ ನಮನ

ಮುಖ್ಯ ಅತಿಥಿಯಾಗಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ ಮಾತನಾಡಿ, ಸಾಧಕರು ಯಾವೊತ್ತೂ ಮಾತನಾಡುವುದಿಲ್ಲ. ಅವರ ಸಾಧನೆಗಳೇ ಮಾತನಾಡುತ್ತವೆ ಎನ್ನುವಂತೆ ನಮ್ಮಿಂದ ಅಗಲಿದ ಇವರು ಲೋಕ ಇರುವವರೆಗೆ ಅಜರಾಮರವಾಗಿರುತ್ತಾರೆ ಎಂದು ತಿಳಿಸಿದರು.

ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಈ ದಿನಮಾನಗಳಲ್ಲಿ ದೈಹಿಕ ಅಂತರ, ಮತ್ತು ಮಾಸ್ಕ್, ಸ್ಯಾನಿಟೈಸರ್ ಧರಿಸುವ ಮೂಲಕ ಕೊರೊನಾ ಮಹಾಮಾರಿಯಿಂದ ಪಾರಾಗಬೇಕು ಎಂದು ಹೇಳಿದರು. ಕಾಲೇಜಿನ ಪ್ರಾಚಾರ್ಯ ಪ್ರೊ. ಎಂ.ಸಿ. ಕಿರೇದಳ್ಳಿ ಅಧ್ಯಕ್ಷತೆ ವಹಿಸಿದ್ದರು. ಕರವೇ ಜಿಲ್ಲಾಧ್ಯಕ್ಷ ಮಂಜುನಾಥ ನಾಲವಾರಕರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾವತಿ ಪಾಟೀಲ ನಿರೂಪಿಸಿ ವಂದಿಸಿದರು.

ದಿವ್ಯಾಂಗ ನೌಕರರಿಗೆ ಮನೆಯಿಂದಲೇ ‌ಕರ್ತವ್ಯ ನಿರ್ವಹಣೆಗೆ ಅವಕಾಶ

ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಪ್ರೊ. ಚೆನ್ನಾರಡ್ಡಿ ಪಾಟೀಲ, ಕರುಣೇಶ ಹಿರೇಮಠ, ಗುರುರಾಜ ಕುಲಕರ್ಣಿ, ನಿರಂಜನ್ ವೀರಶೆಟ್ಟಿ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here