ಸುರಪುರ:ಸಮಯ ಮೀರಿ ತೆಗೆದ ಅಂಗಡಿಗಳ ಮೇಲೆ ದಾಳಿ: ದಂಡ ವಿಧಿಸಿ ಎಚ್ಚರಿಕೆ

0
14

ಸುರಪುರ: ನಗರದ ಹಸನಾಪುರ ಪೆಟ್ರೋಲ್ ಬಂಕ್ ಬಳಿಯಲ್ಲಿ ಅವಧಿ ಮೀರಿ ತೆಗೆದಿದ್ದ ಅಂಗಡಿಗಳ ಮೇಲೆ ನಗರಸಭೆ ಅಧಿಕಾರಿಗಳು ದಾಳಿ ಮಾಡಿ ಅಂಗಡಿ ಮುಚ್ಚಿಸುವ ಜೊತೆಗೆ ದಂಡ ವಿಧಿಸಿ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಗರಸಭೆ ಅಧಿಕಾರಿಗಳು,ಈಗಾಗಲೇ ಬೆಳಿಗ್ಗೆ ೦೬ ಗಂಟೆಯಿಂದ ೧೦ ಗಂಟೆಯವರೆಗೆ ಮಾತ್ರ ಅಗತ್ಯ ವಸ್ತುಗಳ ಅಂಗಡಿ ತೆಗೆಯಲು ಅವಕಾಶ ನೀಡಿದೆ.ಆದರೆ ತಮಗೆ ಅಂಗಡಿ ತೆಗೆಯಲು ಯಾರು ಪರವಾನಿಗೆ ನೀಡಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.ಅಲ್ಲದೆ ತಾವು ಕೋವಿಡಿ ನಿಯಮಗಳನ್ನು ಮೀರಿ ಅಂಗಡಿಗಳನ್ನು ತೆಗೆದಿರುವುದರಿಂದ ದಂಡ ವಿಧಿಸಲಾಗುತ್ತದೆ.ಅಲ್ಲದೆ ಇನ್ನೊಮ್ಮೆ ಅಂಗಡಿ ತೆಗೆದಿದ್ದು ಕಂಡುಬಂದಲ್ಲಿ ನಿಮ್ಮ ಅಂಗಡಿಯ ಸನ್ನದು ರದ್ದುಗೊಳಿಸುವ ಜೊತೆಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.ನಂತರ ಅಂಗಡಿಗಳ ಮಾಲೀಕರಿಗೆ ದಂಡ ವಿಧಿಸಲಾಯಿತು.

Contact Your\'s Advertisement; 9902492681

ಎಲ್ಲಾ ಅಂಗಡಿಗಳಿಗೆ ನಗರಸಭೆ ಸಿಬ್ಬಂದಿಯೆ ಬೀಗ ಹಾಕಿ ತೆಗೆದುಕೊಂಡು ಬಂದರು.ಈ ಸಮಯದಲ್ಲಿ ವಿವಿಧ ಅಂಗಡಿಗಳಿಗೆ ಒಟ್ಟು ೭ ಸಾವಿರ ರೂಪಾಯಿಗಳ ದಂಡ ವಿಧಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here