ಎಲ್ಲರ ಒಳ್ಳಿತನ್ನೇ ಬಯಸಿದ ಹೆಮರೆಡ್ಡಿ ಮಲ್ಲಮ್ಮ

0
70

ಶಹಾಬಾದ: ಕಷ್ಟದಲ್ಲೂ ಎಲ್ಲರ ಒಳ್ಳಿತನ್ನೇ ಬಯಸಿದ ಹೆಮರೆಡ್ಡಿ ಮಲ್ಲಮ್ಮ ಇಡೀ ಮಹಿಳಾ ಲೋಕಕ್ಕೆ ಮಾದರಿಯಾಗಿದ್ದಾರೆ ಎಂದು ತೊನಸನಹಳ್ಳಿ (ಎಸ್)ನ ಕೊತ್ತಲಪ್ಪ ಶರಣರು ಹೇಳಿದರು.

ಅವರು ಸೋಮವಾರ ತೊನಸನಹಳ್ಳಿ (ಎಸ್) ಗ್ರಾಮ ಪಂಚಾಯತಿ ಕಛೇರಿಯಲ್ಲಿ ಆಯೋಜಿಸಲಾದ ಹೆಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸಂಕಷ್ಟ ಅನುಭಸಿಯೂ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದಂತೆ ನಾವು ಸಮಾಜದ ಏಳಿಗೆಗೆ ಶ್ರಮಿಸಬೇಕು. ಇಂದುಸಮಾಜ ಸುಧಾರಣೆಯನ್ನು ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಅಂತಹದರಲ್ಲಿ ಮಹಿಳೆ ಸಮಾಜ ಸುಧಾರಣೆ ಮಾಡಲು ಮುಂಬರದ ಕಾಲದಲ್ಲಿ ಹೇಮರೆಡ್ಡಿ ಮಲ್ಲಮ್ಮ ಮಹಿಳೆಯರ ಪ್ರತಿನಿಧಿಯಾಗಿ ನಿಂತು ಸುಧಾರಣೆ ಮಾಡಿದರು.ಅವರ ಆತ್ಮಬಲವನ್ನು ಎಲ್ಲಾ ಮಹಿಳೆಯರು ಹೊಂದಿದರೇ ಸಮಾಜ ಸುಂದರವಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಬೆಳ್ಳೆಪ್ಪ ಖಣದಾಳ, ಸಿದ್ದು ಸಜ್ಜನ, ಬಿಜೆಪಿ ಮುಖಂಡ ಬಸವರಾಜ ಮದ್ರಕಿ, ಮಲ್ಲಿಕಾರ್ಜುನ ಗೊಳೆದ, ಮಲ್ಲಪ್ಪ ಮಾಂಗ, ಅಜೀಜ್ ಜಮಾದಾರ,ಸಂಗಪ್ಪ ಪರೀಟ್, ಜಗು ಅಳ್ಳೊಳ್ಳಿ, ಅನೇಕರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here