ಚಿತ್ತಾಪುರ: ರಾಜ್ಯಾದ್ಯಂತ ಹಾಗೂ ನಮ್ಮ ಕಲಬುರ್ಗಿಯಲ್ಲಿ ಕೂಡ ಕರೋನಾ ಮಹಾಮಾರಿ ತೀವ್ರವಾಗಿ ಹರಡುತ್ತಿದ್ದು ಎಲ್ಲರೂ ಸರ್ಕಾರ ಹೊರಡಿಸಿರುವ ಕೋವಿಡ್ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ಪೇಠಶಿರೂರ್ ಗ್ರಾಮದ ಕಾಂಗ್ರೆಸ್ ಯುವ ಮುಖಂಡ ಶಿವಶರಣಪ್ಪ ಗೌಡ ಮಾಲಿ ಪಾಟೀಲ್ ಹೇಳಿದರು.
ಪೇಠಶಿರೂರ್ ಗ್ರಾಮದಲ್ಲಿ ಸಾರ್ವಜನಿಕರಿಗೆ ಮಾಸ್ಕ್ ವಿತರಣೆ ಮಾಡಿ ಮಾತನಾಡಿದ ಅವರು ಕರೋನಾ ಕಳೆದ ಒಂದು ವರ್ಷದಿಂದ ಜನ ಜೀವನವನ್ನು ಇನ್ನಿಲ್ಲದಂತೆ ಕಾಡುತ್ತಿದೆ.ಮಹಾಮಾರಿ ಕರೋನಾ ವೈರಸ್ 2ನೇ ಅಲೆ ಬಹಳ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜನ ಸಾಮಾನ್ಯರೇ ಇದನ್ನು ತಡೆಗಟ್ಟಲು ಜಾಗೃತರಾಗಬೇಕು.ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳೋಣ ಎಂದರು.
ಸಾರ್ವಜನಿಕರು ದಯಮಾಡಿ ಮನೆಯಿಂದ ಹೊರಬರದೇ,ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಮಾತ್ರ ಸರ್ಕಾರ ಹೊರಡಿಸಿರುವ ನಿಯಮಗಳನ್ನು ಪಾಲಿಸುವ ಮೂಲಕ ಸೋಂಕು ಹರಡುವುದನ್ನು ತಡೆಯೋಣ ಎಂದರು. 18 ವರ್ಷಕ್ಕಿಂತ ಮೇಲ್ಪಟ್ಟವರು ಕರೋನಾ ಲಸಿಕೆ ಪಡೆದು ಮಹಾಮಾರಿ ಕೋವಿಡ್ ವೈರಸ್ ಹರಡುವುದನ್ನು ತಡೆಗಟ್ಟಬೇಕಿದೆ ಎಂದು ಗ್ರಾಮದ ಜನತೆಗೆ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ವೆಂಕಟೇಶ್, ನಾಗಪ್ಪ ಪಡಶೆಟ್ಟಿ,ಶರಣಪ್ಪ ಬೆಲ್ಲದ್,ಶರಣಪ್ಪ ಗುಡುರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.