ಸುರಪುರ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಶಾಸಕ ರಾಜುಗೌಡ ಕೋವಿಡ್-೧೯ ಸಭೆ

0
15

ಸುರಪುರ: ತಾಲೂಕಿನ ದೇವಿಕೇರಾ ಬಾದ್ಯಾಪುರ ದೇವರಗೋನಾಲ ಪೇಠ ಅಮ್ಮಾಪುರ ದೇವಾಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಶಾಸಕ ನರಸಿಂಹ ನಾಯಕ (ರಾಜುಗೌಡ) ಭೇಟಿ ನೀಡಿ ಕೊರೊನಾ ಕುರಿತು ಜನರೊಂದಿಗೆ ಸಮಾಲೋಚನೆ ನಡೆಸುವ ಜೊತೆಗೆ ಗ್ರಾಮ ಪಂಚಾಯತಿಗಳಲ್ಲಿ ಟಾಸ್ಕ್‌ಫೋರ್ಸ್ ಸಭೆಯನ್ನು ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿಸ ಶಾಸಕರು,ಈಗ ರಾಜ್ಯದಲ್ಲಿ ತೀವ್ರ ಸಂಕಷ್ಟದ ಕಾಲವಿದೆ,ದಯವಿಟ್ಟು ಯಾರುಕೂಡ ಅನಾವಶ್ಯಕವಾಗಿ ಮನೆಯಿಂದ ಹೊರಗೆ ಬರಬೇಡಿ,ಅಲ್ಲದೆ ಎಲ್ಲರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಮತ್ತು ಸಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ತಿಳಿಸಿದರು.ಕೋವಿಡ್-೧೯ ಸಭೆಯನ್ನು ನಡೆಸಿ,ಅಂಗನವಾಡಿ ಆಶಾ ಕಾರ್ಯಕರ್ತೆಯರಿಂದ ಆಯಾ ಗ್ರಾಮಗಳಲ್ಲಿ ಕೋವಿಡ್ ಸೊಂಕಿತರು ಎಷ್ಟು, ಆರಾಮವಾಗಿರುವವರು ಮತ್ತು ಹೋಮ್ ಹೈಸೊಲೇಶನ್‌ಲ್ಲಿ ಇರುವವರ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.ಅಲ್ಲದೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ತಮ್ಮ ಕರ್ತವ್ಯದ ಭರದಲ್ಲಿ ತುಂಬಾ ಜಾಗೃತಿಯನ್ನು ವಹಿಸುವಂತೆ ಸಲಹೆ ನೀಡಿದರು.

Contact Your\'s Advertisement; 9902492681

ಪ್ರಗತಿಪರ ರೈತ ಬಸನಗೌಡ ಕಮತಗಿ ಕೊರೊನಕ್ಕೆ ಬಲಿ

ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಅಂಬ್ರೇಶ ಪೊಲೀಸ್ ಇನ್ಸ್ಪೇಕ್ಟರ್ ಎಸ್.ಎಮ್.ಪಾಟೀಲ್ ಸೇರಿದಂತೆ ಅನೇಕ ಜನ ಮುಖಂಡರು ಮತ್ತು ಗ್ರಾಮ ಪಂಚಾಯತಿ ಅಭಿವೃಧ್ಧಿ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯತಿ ಸದಸ್ಯರು ಹಾಗು ಅಂಗನವಾಡಿ ಆಶಾ ಕಾರ್ಯಕರ್ತೆಯರು ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿಗಳಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here