ಶಹಾಬಾದ: ನಗರದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ದಿ. ನಾಗೂರೆಖಾನ ಮತ್ತು ಪುರಸಭೆಯ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ದಿ. ಸುಭಾಷ ಪವಾರ ಅವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಶೀದ್ ಮರ್ಚಂಟ ಮಾತನಾಡಿ,ಕಾಂಗ್ರೆಸ್ ಪಕ್ಷದ ಮುಖಂಡರಾದ ನಾಗೂರೆಖಾನ ಹಾಗೂ ಸುಭಾಷ ಪವಾರ ಅವರ ನಿಧನದಿಂದ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ.
ಕಡು ಬಡವರಿಗೆ ವ್ಯಯಕ್ತಿಕ ಹಣದ ಸಹಾಯ ಮಾಡಿ ಮಾನವೀಯತೆ ಮೆರೆದ ಕಾಂಗ್ರೆಸ್ ಯುವ ನಾಯಕ ಡಾ. ರವಿ ಚವ್ಹಾಣ
ನಾಗೂರೆಖಾನ ಅವರು ಸುಮಾರು ದಶಕಗಳ ಕಾಲ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಪಕ್ಷಕ್ಕಾಗಿ ಉತ್ತಮ ಕೆಲಸ ಮಾಡಿದ್ದರು. ಅಲ್ಲದೇ ಸುಭಾಷ ಪವಾರ ಅವರು ಪುರಸಭೆಯ ಮಾಜಿ ಅಧ್ಯಕ್ಷರಾಗಿ ಸಾಕಷ್ಟು ಅಭಿವೃದ್ಧಿಪರವಾದ ಕೆಲಸ ಮಾಡಿದ್ದರು.ಈ ಇಬ್ಬರೂ ಯಾವಾಗಲೂ ಪಕ್ಷಕ್ಕೆ ಬೆನ್ನೆಲಬು ಆಗಿದ್ದರು. ಇವರ ಅಗಲಿಕೆ ಮಾತ್ರ ನಮಗೆಲ್ಲರಿಗೂ ಅಘಾತ ಉಂಟಾಗಿದೆ. ಕಾಂಗ್ರೆಸ್ ಪಕ್ಷದ ಏಳ್ಗೆಗಾಗಿ ಸದಾ ದುಡಿಯುತ್ತಿದ್ದ ಇವರಿಬ್ಬರು ಅತ್ಯಂತ ಸರಳ ಸಜ್ಜನ ವ್ಯಕ್ತಿತ್ವದವರಾಗಿದ್ದರು. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಕುಟುಂಬ ವರ್ಗದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.
ಕಾಂಗ್ರೆಸ್ ಪಕ್ಷ ಪ್ರಧಾನ ಕಾರ್ಯದರ್ಶಿ ಮೃತ್ಯುಂಜಯ್ ಹಿರೇಮಠ, ನಗರಸಭೆಯ ಮಾಜಿ ಅಧ್ಯಕ್ಷ ಗಿರೀಶ ಕಂಬಾನೂರ, ಶಂಕರ ಕುಸಾಳೆ, ಸೂರ್ಯಕಾಂತ ಕೋಬಾಳ, ಅನ್ವರ ಪಾಶಾ, ಶರಣು ಪಗಲಾಪೂರ,ಡಾ.ಅಹ್ಮದ್ ಪಟೇಲ್,ಹಾಷಮ ಖಾನ,ಕಿರಣ ಚವ್ಹಾಣ,ಅನ್ವರ ಚಪಾಟ್ಲೆ, ಮೆಹಬೂಬ ಅಪ್ಸರಾ, ಮಹ್ಮದ್ ಜಾವೀದ್, ಸಾಜಿದ್ ಗುತ್ತೆದಾರ ಸೇರಿದಂತೆ ಅನೇಕರು ಇದ್ದರು.