ದಿವಂಗತ ವಾಲ್ಮೀಕಿ ನಾಯಕ್ ಅಭಿಮಾನಿ ಬಳಗದಿಂದ ಆಹಾರ ವಿತರಣೆ: ಪಿಎಸ್ಐ ಮಂಜುನಾಥ ರೆಡ್ಡಿ ಚಾಲನೆ

0
197

ಚಿತ್ತಾಪುರ:ಕರೋನಾ 2 ನೇ ಅಲೆಯ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಲಾಕ್ ಡೌನ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಯಾರು ಸಹ ಹಸಿವಿನಿಂದ ಇರಬಾರದು ಎಂಬ ಕಾರಣಕ್ಕೆ ಚಿತ್ತಾಪುರ ಮಾಜಿ ಶಾಸಕ ದಿವಂಗತ ವಾಲ್ಮೀಕಿ ನಾಯಕ್ ಅಭಿಮಾನಿ ಬಳಗದ ವತಿಯಿಂದ ಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಕರೋನಾ ವಾರಿಯರ್ಸ್ ಹಾಗೂ ನಿರ್ಗತಿಕರಿಗೆ ಹೊಟ್ಟೆ ತುಂಬಾ ಊಟ ಹಾಗೂ ಕುಡಿಯಲು ಶುದ್ಧ ನೀರು ವಿತರಿಸಲಾಯಿತು.

ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಮವಾರ ದಿ. ವಾಲ್ಮೀಕಿ ನಾಯಕ್ ಅಭಿಮಾನಿ ಬಳಗದ ವತಿಯಿಂದ ಆಸ್ಪತ್ರೆಯ ಹತ್ತಿರ ಇರುವ ನಿರ್ಗತಿಕರಿಗೆ ಪಿಎಸ್ಐ ಮಂಜುನಾಥ ರೆಡ್ಡಿ ಆಹಾರದ ಪಾಕೇಟ್, ನೀರಿನ ಬಾಟಲಿ ವಿತರಿಸಿವ ಮೂಲಕ ಈ ಸಮಾಜಮುಖಿ ಕಾರ್ಯಕ್ಕೆ ಚಾಲನೆ ನೀಡಿದರು.

Contact Your\'s Advertisement; 9902492681

ಪಟ್ಟಣದಲ್ಲಿ ಯಾರು ಉಪವಾಸ ಇರಬಾರದು ಎಂಬ ಕಾರಣಕ್ಕೆ ಇಂತಹ ಮಹತ್ತರವಾದ ಸಮಾಜಮುಖಿ ಕಾರ್ಯ ಮಾಡುತ್ತಿದ್ದಾರೆ ಇವರ ಈ ಕಾರ್ಯ ಇತರರಿಗೆ ಮಾರ್ಗದರ್ಶನವಾಗಲಿ ಎಂದರು.

ದಿ.ವಾಲ್ಮೀಕಿ ನಾಯಕರ ಅಭಿಮಾನಿ ಮಲ್ಲಿಕಾರ್ಜುನ ಪೂಜಾರಿ ಮಾತನಾಡಿ ಲಾಕ್ ಡೌನ್ ಸಂದರ್ಭದಲ್ಲಿ ನಮ್ಮ ನೆಚ್ಚಿನ ನಾಯಕ ಚಿತ್ತಾಪುರಿನ ಮಾಜಿ ಶಾಸಕ ದಿ. ವಾಲ್ಮೀಕಿ ನಾಯಕರ ಅಭಿಮಾನಿಗಳು ಸೇರಿ ಇಂದಿನಿಂದ ಲಾಕ್ ಡೌನ್ ಮುಗಿಯುವ ವರೆಗೂ ಪ್ರತಿದಿನ ಮಧ್ಯಾಹ್ನ 12:45 ರಿಂದ 1:45ರ ಸಮಯವನ್ನು ನಿಗದಿ ಮಾಡಿ,ಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಕರೋನಾ ವಾರಿಯರ್ಸ್ ಗಳಿಗೆ ಹಾಗೂ ರೈಲು ನಿಲ್ದಾಣ, ಬಸ್ ನಿಲ್ದಾಣ, ಮಾರ್ಕೆಟ್ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಊಟ ಇಲ್ಲದೆ ಇರುವ ನಿರ್ಗತಿಕರಿಗೆ ಮತ್ತು ಚಿಕಿತ್ಸೆಗೆ ಎಂದು ಬಂದ ರೋಗಿಗಳ ಸಂಬಂಧಿಕರಿಗೆ ಕರೋನಾ ನಿಯಂತ್ರಣಕ್ಕೆ ಬರುವವರೆಗೂ ಯಾರು ಕೂಡ ಉಪವಾಸ ಇರಬಾರದು ಎಂಬ ಉದ್ದೇಶದಿಂದ ಆಹಾರ ಮತ್ತು ನೀರು ವಿತರಣೆ ಮಾಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ನಾಗರಾಜ ಭಂಕಲಗಿ, ಕೋಟೇಶ್ವರ ರೇಷ್ಮೀ, ಬಸವರಾಜ ಸುಲಳ್ಳಿ,ಆನಂದ ಪಾಟೀಲ್ ನರಬೋಳಿ,ಮಲ್ಲಿಕಾರ್ಜುನ ಇಜಾರ್,ನಾಗರಾಜ ಹೂಗಾರ,ಪ್ರಭು ಗಂಗಾಣಿ,ರಮೇಶ ಕಾಳನೂರ್,ಶಶಿ ಬಂಡಾರಿ, ಬಾಲಾಜಿ ಬುರಬರೆ,ಹೀರು ರಾಠೋಡ, ಕುನಾಲ ತುರೆ,ಶಂಕರ ರಾವೂರಕರ್, ರಫೀಕ್,ವೈದ್ಯರಾದ ನಂದಾ ರಾಂಪುರೆ,ಶ್ರೀಧರ ಲಾಕೆ,ಸೈದಾ ರುಬಿನಾ ಮುಂತಾದವರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here