40ನೇ ಜನುಮ ದಿನದ ಅಂಗವಾಗಿ 28ರಂದು 40 ಸಸಿಗಳ ನೆಡುವಿಕೆ

0
51

ಕಲಬುರಗಿ: ವಿಶ್ವಜ್ಯೋತಿ ಪ್ರತಿಷ್ಠಾನಕ್ಕೆ ಹನ್ನೊಂದರ ಹೊನಲು ಹಾಗೂ ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಯವರ ಜನ್ಮಜ್ಯೋತಿಗೆ 40 ರ ಬೆಳಕು ನಿಮಿತ್ತ ತಿಂಗಳಪರ್ಯಂತ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರತಿಷ್ಠಾನದ ಸಮಿತಿ ತಿಳಿಸಿದೆ.

ಕಾರ್ಯಕ್ರಮದಲ್ಲಿ ‘ಆರೋಗ್ಯ ವಿಜಯ’ ಶೀರ್ಷಿಕೆಯಡಿಯಲಿ ನಾಳೆ (ಜೂನ್ 28) ಬೆಳಗ್ಗೆ 10.30 ಕ್ಕೆ ಹೊರವಲಯದ ತಾಜ್ ಸುಲ್ತಾನಪುರದ ಕೆ.ಎಸ್.ಆರ್.ಪಿ. ಕ್ಯಾಂಪನಲ್ಲಿ ನಲ್ವತ್ತು ಸಸಿಗಳ ನೆಡುವ ವಿಶೇಷ ಕಾರ್ಯಕ್ರಮವೊಂದನ್ನು ಏರ್ಪಡಿಸಲಾಗಿದ್ದು, ಇಂದಿನ ಜನರಲ್ಲಿ ಪರಿಸರ ಪ್ರೇಮ ಹೆಚ್ಚಿಸುವುದರ ಜತೆಗೆ ಸಸಿಗಳ ಬೆಳೆಸುವ ಅಗತ್ಯತೆ ಕುರಿತು ಜಾಗೃತಿ ಹಾಗೂ ಪರಿಶುದ್ಧವಾದ ಪರಿಸರವಿಟ್ಟುಕೊಳ್ಳಬೇಕೆಂಬ ಮನೋಭಾವ ಬೆಳೆಸುವ ದಿಸೆಯಲ್ಲಿ ಕಾರ್ಯಕ್ರಮ ಆಯೋಜಿಸಿದೆ.

Contact Your\'s Advertisement; 9902492681

ಕೆ.ಎಸ್.ಆರ್.ಪಿ.ಕಮಾಂಡೆಂಟ್ ಬಸವರಾಜ ಜಿಳ್ಳೆ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಶಾಸಕಿ ಅರುಣಾ ಸಿ.ಪಾಟೀಲ ರೇವೂರ,  ಜಿಪಂ ನ ಮಾಜಿ ಉಪಾಧ್ಯಕ್ಷರೂ ಆದ ಹಾಲಿ ಸದಸ್ಯ ಹರ್ಷಾನಂದ ಸುಭಾಷ ಗುತ್ತೇದಾರ, ಜಿಲ್ಲಾ ಪ.ಜಾ.-ಪ.ಪಂ. ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಾಂತವೀರ ಬಡಿಗೇರ, ವಾಗ್ಮಿ ಪೂಜಾ ಬಂಕಲಗಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಕಾರ್ಯಾಧ್ಯಕ್ಷ ರವೀಂದ್ರಕುಮಾರ ಭಂಟನಳ್ಳಿ ಹಾಗೂ ಸಂಚಾಲಕ ಪರಮೇಶ್ವರ ಶಟಕಾರ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here