ಕಲಬುರಗಿ: ಪ್ರಧಾನಿ ನರೆಂದ್ರ ಮೋದಿ ಸರಕಾರದ ಏಳನೇ ವರ್ಷ ಪೂರ್ಣಗೊಳಿಸಿದಕ್ಕೆ ಸೆವಾಹಿ ಸಂಘಟನಾ ಅಡಿಯಲ್ಲಿ ನಗರದ ವಾರ್ಡ್ ನಂ 49 ರಲ್ಲಿ ಬರುವ ವಿಠ್ಠಲ್ ನಗರ ಖೋಬಾಪ್ಲಾಟ್ನಲ್ಲಿ ಬರುವ ಹನುಮಾನ ದೇವಸ್ಥಾನ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಕುಡಾ ಅಧ್ಯಕ್ಷ ದಯಾಘನ್ ಧಾರವಾಡಕರ್ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹಾದೇವ ಬೆಳಮಗಿ, ಬಿಜೆಪಿ ನಗರ ಜಿಲ್ಲಾ ಕಾಂiÀರ್iದರ್ಶಿ ಡಾ. ಶಂಭುಲಿಂಗ ಪಾಟೀಲ್ ಬಳಬಟ್ಟಿ, ನಾಗೆಂದ್ರರಾವ ದೇಶಮುಖ, ಸೂರ್ಯಕಾಂತ ಪಾಟೀಲ್, ಪ್ರಹ್ಲಾದ್ ಪೂಜಾರಿ, ಶರಣು ಗೋಗಿ, ಮಲ್ಲಿನಾಥ ಪಾಟೀಲ್, ವಾರ್ಡ ಅಧ್ಯಕ್ಷ ಪ್ರಶಾಂತ ಖಂಡಿಲವಾಲ್, ನಿಕೀಲ್ ಮುಗಳಿ ಸೇರಿದಂತೆ ಇನ್ನಿತರರು ಇದ್ದರು.