ಕೋಲಾರ: ಆಯ್ದ ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ

0
18

ಕೋಲಾರ: ತಾಲೂಕಿನ ನರಸಾಪುರ ಗ್ರಾಮದಲ್ಲಿ ಕೋಲಾರ ಘಟಕದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆಯ್ದ ಬಡ ಕುಟುಂಬದವರಿಗೆ ಕೋಲಾರ ಜಿಲ್ಲಾ ನಿರ್ದೇಶಕರಾದ ಚಂದ್ರಶೇಖರ್ ಜೆ ಅವರ ಮಾರ್ಗದರ್ಶನದಂತೆ ಇಂದು ಆಹಾರ ಕಿಟ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ವಲಯದ ಮೇಲ್ವಿಚಾರಕರಾದ ಜಗನ್ನಾಥ್ ರವರು ಮಾತನಾಡಿದ ಕೋವಿಡ್19 ಬಂದು ಇಡೀ ದೇಶ, ಪ್ರಪಂಚದಲ್ಲಿನ ಜನತೆ ಕಷ್ಟದಲ್ಲಿದ್ದಾರೆ. ಮುಖ್ಯವಾಗಿ ಕೆಲವು ಬಡ ಕುಟುಂಬಗಳಂತು ತುತ್ತು ಊಟಕ್ಕೂ ಪರಿತಪಿಸುತ್ತಾ ಇವೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಅನೇಕ ಜನಸ್ನೇಹಿ ಕಾರ್ಯಕ್ರಮಗಳು ನಡೆಯುತ್ತಿವೆ.

Contact Your\'s Advertisement; 9902492681

ಗುಲ್‌ಮೊಹರ್‌ನ ಮೋಡಿ ನೋಡಿ

ಮುಖ್ಯವಾಗಿ ನಮ್ಮ ಸಂಸ್ಥೆ ವತಿಯಿಂದ ರಾಜ್ಯವ್ಯಾಪಿ ನಾವು ದಿನಸಿ ಕಿಟ್ ಗಳನ್ನು ಬಡವರಿಗೆ ವಿತರಿಸುತ್ತಿದ್ದೇವೆ. ಕೋಲಾರದಲ್ಲಿನ ಸರ್ಕಾರಿ ಆಸ್ಪತ್ರೆಗೆ ಆಂಟಿಜನ್ ಲಿಕ್ವಿಡ್ ಜೊತೆಗೆ ಮಾತ್ರೆಗಳನ್ನು ವಿತರಿಸಿದ್ದೇವೆ. ಇಂದು ನರಸಾಪುರ ಗ್ರಾಮದಲ್ಲಿನ ಆಯ್ದ ಬಡಕುಟುಂಬಗಳಿಗೆ ಉಚಿತವಾಗಿ ದಿನಸಿ ಕಿಟ್ ಗಳನ್ನು ವಿತರಿಸಲಾಯಿತು ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದಂತಹ ಕೆಇಬಿ ಚಂದ್ರು ಮತ್ತು ಮುನಿರಾಜು, ಕೋಲಾರ ಘಟಕದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ವಲಯದ ಮೇಲ್ವಿಚಾರಕರಾದ ಜಗನ್ನಾಥ್ ಸೇವಾಪ್ರತಿ ನಿಧಿಯಾದ ಶಂಶಿಯ ಕೌಸರ್, ಜಾವೀದ್ ಅಹಮದ್, ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here