ಹುಲ್ಲೂರ ಅಕ್ರಮ ಮರಳು ಮಾಫಿಯಾತಡೆಗೆ ದಲಿತ ಸಂಘರ್ಷ ಸಮಿತಿ ಮಹೇಶ್ ಕೋಕಿಲ ಆಗ್ರಹ

0
247

ಜೇವರ್ಗಿ: ತಾಲೂಕಿನ ಹುಲ್ಲುರ ಊರಿನ ಭೀಮಾನದಿಯ ದಂಡೆಯ ಮೇಲೆ ಅಕ್ರಮವಾಗಿ ನೂರಾರು ಟಿಪ್ಪರ್ ಗಳ ಮೂಲಕ ಮರುಳನ್ನು ಹಗಲು-ರಾತ್ರಿಯೆನ್ನದೆ ಸಾಗಿಸುತ್ತಿದ್ದು ಸಂಪೂರ್ಣ ಭೀಮಾನದಿಯ ಒಡಲನ್ನು ಬರಿದು ಮಾಡುತ್ತಿದ್ದಾರೆ .ಹಾಗೂ ನೈಸರ್ಗಿಕ ಸಂಪತ್ತನ್ನು ಲೂಟಿ ಹೊಡೆಯುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಕ್ರಾಂತಿಕಾರಿ ಬಣ ಸಂಚಾಲಕರಾದ ಮಹೇಶ್ ಕೋಕಿಲೆ ತಹಸಿಲ್ದಾರರು ಜೇವರ್ಗಿ ಅವರಿಗೆ ಮನವರಿಕೆ ಮಾಡಿದರು.

ಈ ಕುರಿತಂತೆ ಮನವಿ ಪತ್ರವನ್ನು ಸಲ್ಲಿಸಿದರು .ಕೇವಲ ಬೆರಳಣಿಕೆಯಷ್ಟು ವಾಹನಗಳಿಗೆ ಮಾತ್ರ ರಾಯಲ್ಟಿ ಗಳನ್ನು ಪಡೆದು ಉಳಿದ ಟಿಪ್ಪರ್ ಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದಾರೆ. ಟಿಪ್ಪರ್ ಗಳಿಗೆ ,ಲಾರಿ ವಾಹನಗಳಿಗೆ ನಂಬರ್ ಪ್ಲೇಟ್ ಸಹ ಇರುವುದಿಲ್ಲ . ಈ ಕುರಿತಂತೆ ಯಾವುದೇ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿರುವುದಿಲ್ಲ ಎಂದು ತಿಳಿಸಿದರು.

Contact Your\'s Advertisement; 9902492681

ಇಲ್ಲಿನ ಹುಲ್ಲೂರು ಗ್ರಾಮದ ದಂಡೆಯ ಭೀಮಾನದಿಯ ಒಳಗಡೆ ರಸ್ತೆಯನ್ನು ನಿರ್ಮಿಸಿದ್ದು ಸಂಪೂರ್ಣವಾಗಿ ಮರಳು ಬರಿದಾಗಿದ್ದು, ಪಕ್ಕದ ರೈತರ ಜಮೀನಿನಲ್ಲಿ ಮರಳು ರಾಶಿ ಗುಡ್ಡೆ ಹಾಕಿದ್ದಾರೆ ,ಈ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಸಂಘಟನೆಯ ನೇತೃತ್ವದಲ್ಲಿ ಉಗ್ರ ಸ್ವರೂಪದ ಹೋರಾಟ ಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಮನವಿ ಪತ್ರವನ್ನು ಸಲ್ಲಿಸುವಾಗ ಸುಭಾಷ ಆಲೂರ್ ,ಅಬ್ದುಲ್ ಘನಿ, ವಿಶ್ವರಾಧ್ಯ ಗೋಪಾಲಕರ ಸೇರಿದಂತೆ ಇತರ ಪದಾಧಿಕಾರಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here