ಸುರಪುರ: ಭಾರತೀಯ ಜನತಾ ಪಕ್ಷದ ಯುವ ಮೋರ್ಚಾದ ಮುಖಂಡರು ಸಸಿಯನ್ನು ನೆಡುವ ಮೂಲಕ ಡಾ: ಶ್ಯಾಮ್ ಪ್ರಸಾದ ಮುಖರ್ಜಿ ಬಲಿದಾನ ದಿನವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಯುವ ಮೋರ್ಚಾ ಸುರಪುರ ಮಂಡಲದ ಅಧ್ಯಕ್ಷ ಶ್ರವಣ ಕುಮಾರ ನಾಯಕ ಡೊಣ್ಣಿಗೇರಾ ಮಾತನಾಡಿ,ದೇಶದ ಅಖಂಡತೆಗೆ ಸಾರ್ವಭೌಮತ್ವದ ಉಳಿಕೆಗೆ ಬಲಿದಾನಗೌದ ಧೀಮಂತ ನಾಯಕರು ಹಾಗು ಭಾರತೀಯ ಜನಸಂಘದ ಸ್ಥಾಪಕರಾದ ಡಾ:ಶ್ಯಾಮ ಪ್ರಸಾದ ಮುಖರ್ಜಿ ಅವರ ಬಲಿದಾನ ದಿನದಂದು ನಾವೆಲ್ಲರು ಅರ್ಥಪೂರ್ಣವಾಗಿ ಈ ದಿನವನ್ನು ಆಚರಿಸುವ ಉದ್ದೇಶದಿಂದ ಸಸಿ ನೆಡುವ ಮೂಲಕ ಈ ದಿನದ ಸ್ಮರಣೆ ಶಾಸ್ವತವಾಗಿ ಉಳಿಯುವಂತೆ ಆಚರಿಸಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಭಾಗವಹಿಸಿದ್ದ ಎಲ್ಲಾ ಮುಖಂಡರು ಸಸಿಗಳನ್ನು ನೆಟ್ಟು ನೀರೆರೆಯುವ ಮೂಲಕ ಬಲಿದಾನ ದಿನ ಆಚರಿಸಿದರು.ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಕೃಷ್ಣ ಮಂಗಿಹಾಳ ಉಪಾಧ್ಯಕ್ಷ ಶೇಖರ ಸೂಗುರು ವಿಜಯಕುಮಾರ್ ಸುರಪುರ ಬಸನಗೌಡ ಮಂಗಿಹಾಳ ಸೇರಿದಂತೆ ಅನೇಕರಿದ್ದರು.