ಸುರಪುರ ನಗರದಲ್ಲಿ ರಸ್ತೆ ಅಗಲೀಕರಣ ಮಾಡುವಂತೆ ಕೆಎಸ್‌ಡಿಎಸ್‌ಎಸ್ ಪ್ರತಿಭಟನೆ

0
23

ಸುರಪುರ:ನಗರದಲ್ಲಿಯೂ ರಸ್ತೆ ಅಗಲೀಕರಣ ಆರಂಭಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ನಗರಸಭೆ ಮುಂದೆ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ,ರಂಗಂಪೇಟೆಯಲ್ಲಿ ರಸ್ತೆ ಅಗಲೀಕರಣ ಮಾಡಲಾಗುತ್ತಿದೆ,ಆದರೆ ಸುರಪುರ ನಗರದಲ್ಲಿನ ರಸ್ತೆಗಳು ತುಂಬಾ ಇಕ್ಕಟ್ಟಾಗಿವೆ.ಆದ್ದರಿಂದ ನಗರದ ಮಹಾತ್ಮ ಗೌತಮ್ ಬುದ್ಧ ವೃತ್ತದಿಂದ ದರಬಾರ ರಸ್ತೆಯ ಮಾರ್ಗವಾಗಿ ಸರದಾರ್ ವಲ್ಲಭಬಾಯಿ ಪಟೇಲ್ ವೃತ್ತ ಹಾಗು ಮಹಾತ್ಮ ಗೌತಮ್ ಬುದ್ಧ ವೃತ್ತದಿಂದ ಬುದ್ಧ ವಿಹಾರದ ವರೆಗಿನ ರಸ್ತೆ ಅಗಲೀಕರಣಗೊಳಿಸಿ ಹಾಗು ಗೌತಮ್ ಬುದ್ಧರ ವೃತ್ತದ ಎದರುಗಡೆ ಇರುವ ಸರಕಾರಿ ಆಸ್ಪತ್ರೆಯ ಸಿಬ್ಬಂದಿಗಳ ವಸತಿ ಗೃಹಗಳ ಮುಂದಿನ ಸ್ಥಳವನ್ನು ಅನೇಕರು ಒತ್ತುವರಿ ಮಾಡಿಕೊಂಡು ಕೆಲವರು ಗ್ಯಾರೇಜ್ ಮತ್ತಿತರೆ ಅಂಗಡಿಗಳನ್ನು ಇಟ್ಟುಕೊಂಡಿದ್ದಾರೆ.ಇದನ್ನು ತೆರವುಗೊಳಿಸಿ ಪೊಲೀಸ್ ಠಾಣೆಗೆ ಹೋಗಲು ರಸ್ತೆಯನ್ನು ನಿರ್ಮಾಣ ಮಾಡಿ ವಾಹನಗಳ ಓಡಾಟಕ್ಕೆ ಅನುಕೂಲ ಮಾಡಿಕೊಡುವಂತೆ ಆಗ್ರಹಿಸಿದರು.

Contact Your\'s Advertisement; 9902492681

ನಂತರ ನಗರಸಭೆ ಅಧ್ಯಕ್ಷೆ ಸುಜಾತಾ ವೇಣುಗೋಪಾಲ ಜೇವರ್ಗಿಯವರಿಗೆ ಮನವಿಯನ್ನು ಸಲ್ಲಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಅಜೀಜಸಾಬ್ ಐಕೂರು ಮಾನಪ್ಪ ಬಿಜಾಸಪುರ ಹಣಮಂತ ಬಾಂಬೆ ಜಟ್ಟೆಪ್ಪ ನಾಗರಾಳ ರಾಮಣ್ಣ ಶೆಳ್ಳಗಿ ಬಸವರಾಜ ಗೋನಾಲ ಖಾಜಾಹುಸೇನಿ ಗುಡಗುಂಟಿ ಮಹೇಶ ಸುಂಗಲಿಕರ್ ಯಂಕಪ್ಪ ಹೊಸ್ಮನಿ ಸಾಬರಡ್ಡಿ ಮೈಲಾಪುರ ಆಂಜನೆಯ ಯಲೇರಿ ರಾಜು ಬಾಲಗಾವ್ ಭಾಗಪ್ಪ ಬಡಿಗೇರ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here