ಕೊರೊನಾ ಕಡಿಮೆ ಆಗ್ತಿದೆ,ಕಸಾಪ ಚುನಾವಣೆ ನಡೆಸಿ:ಬಿ ಎಚ್ ನಿರಗುಡಿ

0
137

ಕಲಬುರಗಿ:ಕರೋನಾ ಸೋಂಕು ಪ್ರಕರಣಗಳು ಹೆಚ್ಚಾದ ಕಾರಣಕ್ಕೆ ಮತದಾರರು ಹಾಗೂ ಚುನಾವಣಾ ಸಿಬ್ಬಂದಿ ಹಿತ ದೃಷ್ಟಿಯಿಂದ ಮುಂದೂಡಲಾಗಿದ್ದ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ಸ್ಥಾನದ ಚುನಾವಣೆ ಆಗಸ್ಟ್ ತಿಂಗಳಲ್ಲಿ ನಡೆಸಬೇಕಾಗಿ ಜಿಲ್ಲಾ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಬಿ ಎಚ್ ನಿರಗುಡಿ ಆಗ್ರಹಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯದ ಒಟ್ಟು ಸದಸ್ಯರ ಸಂಖ್ಯೆ 3ಲಕ್ಷ ,ಕಲಬುರಗಿ ಜಿಲ್ಲೆಯ ಒಟ್ಟು ಸದಸ್ಯರು 16ಸಾವಿರ ಅದರಲ್ಲಿ ಮತದಾನ ಆಗುವುದು ಕೇವಲ 50ರಿಂದ 60%ಶೇಕಡಾ ಜಿಲ್ಲಾ;ತಾಲ್ಲೂಕು,ಹೋಬಳಿ ಮಟ್ಟದಲ್ಲಿ ಚುನಾವಣೆ ಇರುವದರಿಂದ ತೊಂದರೆ ಆಗುವುದು ಕಡಿಮೆ ಹೀಗಾಗಿ ಪರಿಷತ್ತಿನ ಪ್ರಸ್ತುತ ಅಧ್ಯಕ್ಷರು ಒಳಗೊಂಡ ಕಾರ್ಯಕಾರಿ ಸಮಿತಿ ಅವಧಿ 2021ಸೆಪ್ಟೆಂಬರ್ 2ರಂದು ಮುಕ್ತಾಯವಾಗುತ್ತದೆ. ಅಷ್ಟರೊಳಗೆ ಚುನಾವಣೆ ನಡೆದು ಹೊಸ ಕಾರ್ಯಕಾರಿ ಸಮಿತಿ ಅಸ್ತಿತ್ವಕ್ಕೆ ಬಂದರೆ ಚೆನ್ನಾಗಿ ಆಗುತ್ತೆ.

Contact Your\'s Advertisement; 9902492681

ಕೊರೊನಾ ಕಡಿಮೆ ಆಗ್ತಿದೆ ಇನ್ನೂ 3ನೇ ಅಲೆ ನವೆಂಬರ್ ತಿಂಗಳಲ್ಲಿ ಬರುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ ಆದ್ದರಿಂದ ಅದಕ್ಕೂ ಮೊದಲೇ ಆದಷ್ಟು ಬೇಗನೆ ಚುನಾವಣೆ ಮಾಡಬೇಕೆಂದು ಸರ್ಕಾರಕ್ಕೆ ಹಾಗೂ ಕಸಾಪ ಚುನಾವಣಾ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here