ಕಲಬುರಗಿ: ತಾಲೂಕಿನ ಸೈಯದ್ ಚಿಂಚೋಳ್ಳಿ ಗ್ರಾಮದಲ್ಲಿ ಸಮಾಜಕಲ್ಯಾಣ ಇಲಾಖೆಯಿಂದ ಶಾಮಬಾಯಿ ಶಿಕ್ಷಣ ಸಂಸ್ಥೆ (ರಿ )ಕಲಬುರ್ಗಿಅಡಿಯಲ್ಲಿ ದಿ. ಚಂದ್ರಶೇಖರ ಪಾಟೀಲ ರೆವೂರ್ ಶಾಲಾ ಕಟ್ಟಡಕ್ಕಾಗಿ ೧.ಕೋಟಿ ರೂ ವೆಚ್ಚದ ಅಡಿಗಲ್ಲು ಸಮಾರಂಭವನ್ನು ಕೆಕೆಆರ್ಡಿಬಿ ಅಧ್ಯಕ್ಷ ಹಾಗೂ ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ ಅವರು ನೆರವೇರಿಸಿದರು.
ಸುಲಫಲ ಮಠದ ಪೀಠಾಧಿಪತಿ ಜಗದ್ಗುರು ಡಾ: ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ಸಂಸ್ಥೆ ಅಧ್ಯಕ್ಷೆ ಸುನೀತಾ ಅನಿಲಕುಮಾರ ಡಾಂಗೆ, ಗ್ರಾ.ಪಂ ಅಧ್ಯಕ್ಷ ಸುನೀಲಕುಮಾರ್ ಮದನಕರ್ ಮತ್ತು ಗ್ರಾಮದ ಮುಖಂಡರು ಇದ್ದರು.