ಚಿತ್ತಾಪುರ: ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಜ್ಜನಶೆಟ್ಟಿ ಫೌಂಡೇಶನ್ ವತಿಯಿಂದ HIV ಪೀಡಿತರಿಗೆ ಆಹಾರ ಧಾನ್ಯಗಳ ಕಿಟ್ ಗಳನ್ನು ವಿತರಿಸಲಾಯಿತು.
ಫೌಂಡೇಶನ್ ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ಕಿಟ್ ವಿತರಿಸಿ ನಮ್ಮ ಅಜ್ಜರಾದ ದಿ. ಬಸವಣಪ್ಪ ಸಜ್ಜನಶೆಟ್ಟಿ ಅವರ 35 ನೇ ಪುಣ್ಯಸ್ಮರಣೆ ಪ್ರಯುಕ್ತ ಕರೋನಾ ಲಾಕ್ಡೌನ್ ಸಮಯದಲ್ಲಿ ಪಟ್ಟಣದಲ್ಲಿ ರುವ ಬಡವರು,ನಿರ್ಗತಿಕರಿಗೆ ಆಹಾರ ಧಾನ್ಯಗಳ ಕಿಟ್ ಗಳನ್ನು ವಿತರಣೆ ಮಾಡಲಾಗಿದೆ ಅಂತೆಯೇ HIV ಪೀಡಿತರಿಗೂ ಕೂಡ ಅವಶ್ಯಕತೆ ಇದೆ ಅವರಿಗೆ ಕಿಟ್ ವಿತರಣೆ ಮಾಡುವುದರಿಂದ ಅವರಿಗೆ ಅನುಕೂಲ ಆಗುತ್ತದೆ ಎಂದು ತಿಳಿದು ತಕ್ಷಣ ವಿತರಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಿದ್ರಾಮ ಸಜ್ಜನಶೆಟ್ಟಿ,ಜಗದೇವ ದಿಗ್ಗಾಂವಕರ್,ಡಾ.ನಂದಾ ರಾಂಪುರೇ,ಸುಜ್ಞಾನಿ ಪಾಟೀಲ್ ಇದ್ದರು.