ಗುಲ್ಲಾಬವಾಡಿ ಬಡಾವಣೆಗೆ ಸ್ಲಂ ಬೋರ್ಡ್ ಬಡಾವಣೆಯೆಂದು ಘೋಷಣೆಗೆ ಸುರೇಶ ಹೊಸಮನಿ ಸಿಎಂಗೆ ಆಗ್ರಹ

0
29

ಕಲಬುರಗಿ: ನಗರದ ಗುಲ್ಲಾಬವಾಡಿ ಬಡಾವಣೆಯನ್ನು ಸ್ಲಂ ಬೋರ್ಡ್ ಇರುವುದನ್ನು ರದ್ದುಗೊಳಿಸಿ ಉತ್ತಮ ಬಡಾವಣೆ ಎಂದು ಬದಲಾವಣೆ ಮಾಡಿರುವುದನ್ನು ರದ್ದುಗೊಳಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಮಹಾನಗರ ಪಾಲಿಕೆಯ ವಾರ್ಡ್ ನಂ ೪೮ ರ ಅಧ್ಯಕ್ಷ ಸುರೇಶ ಜಿ. ಹೊಸಮನಿ ಅವರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಮಹಾನಗರದ ವಾರ್ಡ್ ನಂ. ೪೮ ರಲ್ಲಿ ಬರುವ ಗುಲ್ಲಾಬವಾಡಿ ಬಡಾವಣೆಯಲ್ಲಿ ಸ್ಲಂ ಬೋರ್ಡ್ ಬಡಾವಣೆಯಾಗಿದ್ದು ಇಲ್ಲಿ ಯಾವುದೇ ರೀತಿಯ ಅಭಿವೃದ್ದಿ ಕಾರ್ಯಗಳು ಕೂಡಾ ಆಗಿರುವುದಿಲ್ಲ ಮತ್ತು ಈ ಬಡಾವಣೆಯ ಅಭಿವೃದ್ದಿಯ ಸಲುವಾಗಿ ಸರಕಾರದಿಂದ ಯಾವುದೇ ರೀತಿಯ ಹಣ ಮಂಜೂರು ಆಗಿರುವುದಿಲ್ಲ ಅಲ್ಲದೇ ಈ ಬಡಾಣೆಯಲ್ಲಿ ಸಾರ್ವಜನಿಕ ಶೌಚಾಲಯ, ಒಳಚರಂಡಿ ಸೇರಿದಂತೆ ಹಲವಾರು ಮೂಲಭೂತ ಸೌರ್ಕರ್ಯಗಳು ಕೂಡ ನೀಡಿರುವುದಿಲ್ಲ ಹಾಗೂ ಈ ಬಡಾವಣೆಯಲ್ಲಿ ಪ.ಜಾ. ಪ.ಪಂ. ಜನಾಂಗ ವಾಸವಿರುತ್ತದೆ. ಈ ಬಡಾವಣೆಯಲ್ಲಿ ಸುಮಾರು ೧೫೦೦ ಕ್ಕಿಂತ ಹೆಚ್ಚಿಗೆ ಜನರು ವಾಸಿಸುತ್ತಾರೆ. ಈ ರೀತಿ ಇರುವ ಈ ಬಡಾವಣೆಯನ್ನು ಉತ್ತಮ ಬಡಾವಣೆ ಎಂದು ಸ್ಲಂ ಬೋರ್ಡ್ ಅಧಿಕಾರಿಗಳು ಘೋಷಣೆ ಮಾಡಿರುತ್ತಾರೆ. ಸರಿಯಾಗಿ ಮೂಲ ಭೂತ ಸೌಕರ್ಯವಿಲ್ಲದ ಈ ಬಡಾವಣೆ ಅದು ಹೇಗೆ ಉತ್ತಮ ಬಡಾವಣೆಯಾಗುತ್ತದೆ ಎಂಬುದು ಈ ಬಡಾವಣೆಯ ಸಾರ್ವಜನಿಕರಿಗೆ ತಿಳಿಯುತಲ್ಲ ಎಂದು ಹೇಳಿದರು.

Contact Your\'s Advertisement; 9902492681

ಆದ ಕಾರಣ ಗುಲ್ಲಾಬವಾಡಿ ಬಡಾವಣೆಯನ್ನು ಉತ್ತಮ ಬಡಾವಣೆಯನ್ನು ರದ್ದುಗೊಳಿಸಿ ಸ್ಲಂ ಬೋರ್ಡ್ ಬಡಾವಣೆ ಎಂದು ಘೋಷಿಸಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ಆದೇಶಿಸಬೇಕೆಂದು ಮನವಿ ಮಾಡಲಾಯಿತು ಎಂದು ಸುರೇಶ ಜಿ. ಹೊಸಮನಿ ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here