ಕಲಬುರಗಿ: ನಗರದ ಗುಲ್ಲಾಬವಾಡಿ ಬಡಾವಣೆಯನ್ನು ಸ್ಲಂ ಬೋರ್ಡ್ ಇರುವುದನ್ನು ರದ್ದುಗೊಳಿಸಿ ಉತ್ತಮ ಬಡಾವಣೆ ಎಂದು ಬದಲಾವಣೆ ಮಾಡಿರುವುದನ್ನು ರದ್ದುಗೊಳಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಮಹಾನಗರ ಪಾಲಿಕೆಯ ವಾರ್ಡ್ ನಂ ೪೮ ರ ಅಧ್ಯಕ್ಷ ಸುರೇಶ ಜಿ. ಹೊಸಮನಿ ಅವರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಮಹಾನಗರದ ವಾರ್ಡ್ ನಂ. ೪೮ ರಲ್ಲಿ ಬರುವ ಗುಲ್ಲಾಬವಾಡಿ ಬಡಾವಣೆಯಲ್ಲಿ ಸ್ಲಂ ಬೋರ್ಡ್ ಬಡಾವಣೆಯಾಗಿದ್ದು ಇಲ್ಲಿ ಯಾವುದೇ ರೀತಿಯ ಅಭಿವೃದ್ದಿ ಕಾರ್ಯಗಳು ಕೂಡಾ ಆಗಿರುವುದಿಲ್ಲ ಮತ್ತು ಈ ಬಡಾವಣೆಯ ಅಭಿವೃದ್ದಿಯ ಸಲುವಾಗಿ ಸರಕಾರದಿಂದ ಯಾವುದೇ ರೀತಿಯ ಹಣ ಮಂಜೂರು ಆಗಿರುವುದಿಲ್ಲ ಅಲ್ಲದೇ ಈ ಬಡಾಣೆಯಲ್ಲಿ ಸಾರ್ವಜನಿಕ ಶೌಚಾಲಯ, ಒಳಚರಂಡಿ ಸೇರಿದಂತೆ ಹಲವಾರು ಮೂಲಭೂತ ಸೌರ್ಕರ್ಯಗಳು ಕೂಡ ನೀಡಿರುವುದಿಲ್ಲ ಹಾಗೂ ಈ ಬಡಾವಣೆಯಲ್ಲಿ ಪ.ಜಾ. ಪ.ಪಂ. ಜನಾಂಗ ವಾಸವಿರುತ್ತದೆ. ಈ ಬಡಾವಣೆಯಲ್ಲಿ ಸುಮಾರು ೧೫೦೦ ಕ್ಕಿಂತ ಹೆಚ್ಚಿಗೆ ಜನರು ವಾಸಿಸುತ್ತಾರೆ. ಈ ರೀತಿ ಇರುವ ಈ ಬಡಾವಣೆಯನ್ನು ಉತ್ತಮ ಬಡಾವಣೆ ಎಂದು ಸ್ಲಂ ಬೋರ್ಡ್ ಅಧಿಕಾರಿಗಳು ಘೋಷಣೆ ಮಾಡಿರುತ್ತಾರೆ. ಸರಿಯಾಗಿ ಮೂಲ ಭೂತ ಸೌಕರ್ಯವಿಲ್ಲದ ಈ ಬಡಾವಣೆ ಅದು ಹೇಗೆ ಉತ್ತಮ ಬಡಾವಣೆಯಾಗುತ್ತದೆ ಎಂಬುದು ಈ ಬಡಾವಣೆಯ ಸಾರ್ವಜನಿಕರಿಗೆ ತಿಳಿಯುತಲ್ಲ ಎಂದು ಹೇಳಿದರು.
ಆದ ಕಾರಣ ಗುಲ್ಲಾಬವಾಡಿ ಬಡಾವಣೆಯನ್ನು ಉತ್ತಮ ಬಡಾವಣೆಯನ್ನು ರದ್ದುಗೊಳಿಸಿ ಸ್ಲಂ ಬೋರ್ಡ್ ಬಡಾವಣೆ ಎಂದು ಘೋಷಿಸಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ಆದೇಶಿಸಬೇಕೆಂದು ಮನವಿ ಮಾಡಲಾಯಿತು ಎಂದು ಸುರೇಶ ಜಿ. ಹೊಸಮನಿ ತಿಳಿಸಿದರು.