ಕಲಬುರಗಿ: ಜಿಲ್ಲೆಯ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಆಜಾದಪುರ್ ಗ್ರಾಮದ ವಿವಿಧ ಮನೆಯೊಳಗೆ ಕೊಳಚೆ ಹಾಗೂ ಮಳೆ ನೀರು ನುಗ್ಗಿ ಸಂಕಷ್ಟಕ್ಕೆ ಸಿಲುಕಿರುವ ನಿರಾಶ್ರಿತರ ಕುಟುಂಬಗಳಿಗೆ ತಹಶೀಲ್ದಾರರು ಸೂಕ್ತ ಪರಿಹಾರ ನೀಡಬೇಕೆಂದು ಎಸ್.ಡಿ.ಪಿ.ಐ ಪಕ್ಷದ ಜಿಲ್ಲಾ ಅಧ್ಯಕ್ಷರಾದ ಮೊಹಮ್ಮದ್ ಮೋಹಸಿನ್ ಆಗ್ರಹಿಸಿದ್ದಾರೆ.
ಇಂದು ಗ್ರಾಮಕ್ಕೆ ಪಕ್ಷದ ಮುಖಂಡರಾದ ಮೊಹಮ್ಮದ್ ಮೋಹಸಿನ್, ಅಬ್ದುಲ್ ರಹೀಮ್ ಪಟೇಲ್, ಮೊಹಮ್ಮದ್ ಮಿನಾಜೊದ್ದೀನ್ ನೇತೃತ್ವದಲ್ಲಿ ಭೇಟಿ ನೀಡಿ ಪರಿಶೀಲಿಸಿದರು.
ಪ್ರವಾಹಕ್ಕೆ ಸಿಲಿಕಿರುವ ಕುಟುಂಬಗಳಿಗೆ ಪರಿಹಾರ ಘೋಷಿಸಿ, ಗ್ರಾಮದಲ್ಲಿ ಒಳಚರಂಡಿ ಹಾಗೂ ಕಸ ವಿಲೇವಾರಿ ಕಾರ್ಯಾ ತುರ್ತು ರೀತಿಯಲ್ಲಿ ಮಾಡಬೇಕು ಎಂದು ಅಗ್ರಹಿಸಿ ಒಂದು ವಾರದಲ್ಲಿ ಸಮಸ್ಯೆ ಕುಟುಂಬಗಳಿಗೆ ನೆರವು ಸಿಗದಿದ್ದರೆ ಜಿಲ್ಲಾ ಪಂಚಾಯತ್ ಆಯುಕ್ತ ಗಮನಕ್ಕೆ ತರಲಾಗುವುದೆಂದು ಎಚ್ಚರಿಕೆ ನೀಡಿದರು.