ಸುರಪುರ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ವಾದ) ಸಂಘಟನೆಯ ಜಿಲ್ಲಾ ಉಪ ಪ್ರಧಾನ ಸಂಚಾಲಕರಾಗಿ ನಗರದ ದಲಿತ ಹೋರಾಟಗಾರ ಮಾಳಪ್ಪ ಕಿರದಳ್ಳಿ ನೇಮಕಗೊಂಡಿದ್ದಾರೆ.
ಶಹಾಪುರ ನಗರದ ನೌಕರರ ಭವನದಲ್ಲಿ ಭಾನುವಾರ ನಡೆದ ರಾಜ್ಯ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ರಾಜ್ಯ ಉಪ ಪ್ರಧಾನ ಸಂಚಾಲಕ ನಾಗಣ್ಣ ಬಡಿಗೇರವರ ಅಧ್ಯಕ್ಷತೆಯಲ್ಲಿ ಸಭೆ ಸೇರಿದ ಮುಖಂಡರು ಜಿಲ್ಲಾ ಪದಾಧಿಕಾರಿಗಳನ್ನು ನೇಮಕಗೊಳಿಸಿ ಮಾಳಪ್ಪ ಕಿರದಳ್ಳಿಯವರನ್ನು ಸರ್ವಾನುಮತದಿಂದ ಜಿಲ್ಲಾ ಉಪ ಪ್ರಧಾನ ಸಂಚಾಲಕರನ್ನಾಗಿ ನೇಮಕಗೊಳಿಸಿ ಘೋಷಿಸಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಯ ಕಲಬುರಗಿ ವಿಭಾಗೀಯ ಪ್ರಧಾನ ಸಂಚಾಲಕರಾದ ರಾಮಣ್ಣ ಕಲ್ಲದೇವನಹಳ್ಳಿ ಮುಖಂಡರಾದ ಹೊನ್ನಪ್ಪ ರಸ್ತಾಪುರ,ವಿರೇಂದ್ರ ಪಾಟೀಲ್,ಸಾಯಿಬಾಬಾ ಅಣಬಿ,ರಾಯಪ್ಪ ಗಂಗನಾಳ,ನಾಗರಾಜ ಬೊಮ್ಮನಹಳ್ಳಿ,ಬಸಮ್ಮ ಕೋಗಿಲಕರ್ ಸೇರಿದಂತೆ ಅನೇಕರಿದ್ದರು.