ಕಲಬುರಗಿ: ಇಲ್ಲಿನ ರಂಗಾಯಣದಲ್ಲಿ ನಾಟ್ಯಶಾಸ್ತ್ರ ಅಧ್ಯಯನ ಶಿಬಿರಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.
ಹೆಸರಾಂತ ರಂಗನಟ ನಿರ್ದೇಶಕರಾದ ಹುಲುಗಪ್ಪ ಕಟ್ಟೀಮನಿ ಅವರು ನಿರ್ದೇಶಿಸುತ್ತಿರುವ ಶಿಬಿರದಲ್ಲಿ ನಾಟ್ಯಶಾಸ್ತ್ರದ ವಿವಿಧ ಆಯಾಮಗಳ ಹಿನ್ನೆಲೆಯಲ್ಲಿ ನವರಸಗಳ ನಟನೆಯ ಪಾಠಗಳನ್ನು ರಂಗಾಯಣದ ಕಲಾವಿದರಿಗೆ ಮತ್ತು ಆಸಕ್ತ ಹವ್ಯಾಸಿ ನಟರಿಗೆ ಹೇಳಿ ಕೊಡಲಾಗುವುದು. ಎರಡು ವಾರಗಳ ಕಾಲ ಅಧ್ಯಯನ ಶಿಬಿರ ನಡೆಯಲಿದೆ ಎಂದು ರಂಗಾಯಣ ನಿರ್ದೇಶಕರಾದ ಪ್ರಭಾಕರ ಪ್ರಭಾಕರ ಜೋಶಿ ತಿಳಿಸಿದ್ದಾರೆ.
ರಂಗಭೂಮಿಯಲ್ಲಿ ಕೃಷಿ ಮಾಡುವವರಿಗೆ ನಾಟ್ಯಶಾಸ್ತ್ರದ ಪರಿಚಯ ಇರಬೇಕು ಎಂಬ ನಿಟ್ಟಿನಲ್ಲಿ ಕಲಬುರಗಿ ರಂಗಾಯಣ ಮೊದಲ ಬಾರಿಗೆ ಆಯೋಜಿಸಿರುವ ಶಿಬಿರದ ಸಹಾಯಕ ನಿರ್ದೇಶಕರಾಗಿ ರಂಗಕರ್ಮಿಗಳಾದ ಉಮೇಶ್ ಸಾಲಿಯಾನ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.