ಬಿ.ಎಸ್ ವೈ ಬದಲಿಸಿದ್ದರೆ ರಾಜ್ಯಕ್ಕೆ ನಷ್ಟ: ಲಾಡ್ಲಾಪೂರ

0
96

ಚಿತ್ತಾಪೂರ: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರನ್ನು ಬದಲಿಸಿದರೆ ರಾಜ್ಯಕ್ಕೆ ನಷ್ಟವಾಗಲಿದೆ ಎಂದು ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಸೋಮಶೇಖರ ಎಸ್ ಲಾಡ್ಲಾಪೂರ ನಾಲವಾರ ಅವರು ಹೈ ಕಮಾಂಡ್ ಗೆ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಅಭಿವೃದ್ದಿಯಲ್ಲಿ ಮುಖ್ಯ ಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ ಅವರ ಪಾತ್ರ ದೊಡ್ಡದು. ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಬಿಜೆಪಿ ಸರ್ಕಾರ ರಚಿಸಿದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ.ಇಳಿ ವಯಸ್ಸಿನಲ್ಲೂ ಉತ್ತಮ ಆಡಳಿತ ನಡೆಸುತ್ತಿದ್ದಾರೆ. ಸರ್ವ ಜನಾಂಗದವರ ಏಳಿಗೆಗೆ ಕೆಲಸ ಮಾಡಿದ್ದಾರೆ. ಎಲ್ಲ ಧರ್ಮದವರಿಗೆ ನೆರವು ನೀಡಿದ್ದಾರೆ.

Contact Your\'s Advertisement; 9902492681

ಪ್ರವಾಹ ,ಕರೊನಾ ಸೊಂಕು ಹರಡಿದಾಗ ದಕ್ಷತೆಯಿಂದ ಕಾರ್ಯ ನಿರ್ವಹಿಸಿದ್ದಾರೆ.ವೀರಶೈವ ಸಮಾಜ ಸೇರಿ ವಿವಿಧ ಸಮಾಜದ ಶ್ರೀಗಳು ಹಾಗೂ ಜನರು ಅವರ ಪರ ಇದ್ದಾರೆ. ಯಡಿಯೂರಪ್ಪ ಅವರು ನನ್ನ ಕೈಯಲ್ಲಿ ಆಗಲ್ಲ ಎಂದಾಗಲೇ ಅವರನ್ನು ಸಿ.ಎಮ್ ಸ್ಥಾನದಿಂದ ಕೆಳಗಿಳಿಸಬೇಕು ಪ್ರಮಾಣಿಕ ಮೇಧಾವಿ ಮುತ್ಸದಿ ನಾಯಕನನ್ನು ಅಧಿಕಾರದಿಂದ ವಂಚಿತ ಮಾಡುವುದು ಸರಿಯಲ್ಲ ಎಂದು ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here