ಕಲಬುರಗಿ: ಬಕ್ರೀದ್ ಹಬ್ಬದ ಪ್ರಯುಕ್ತ ಮಹೇಂದ್ರಾ ಇನ್ಸೂರೆನ್ಸ್ ಬ್ರೋಕರ್ ಲಿಮಿಟೆಡ್ ಹಾಗೂ ಮಹೇಂದ್ರಾ ಫೈನಾನ್ಸ್ ವತಿಯಿಂದ ಶ್ರೀನಿವಾಸ ಸರಡಗಿ ಈದಗಾ ಮೈದಾನದಲ್ಲಿ ಮಹೇಂದ್ರಾ ಕಂಪನಿಯ ಸಿಬ್ಬಂದಿ ಶರಣು ಗೋನಾಯಕ ಹಾಗೂ ಸಲಮಾನ ಶೇಖ ಇವರ ನೇತೃತ್ವದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ಪಿಕೆಪಿಎಸ್ ಅಧ್ಯಕ್ಷ ಉಮೇಶ ಗಿರಿಪಗೊಳ, ಯುವ ಮುಖಂಡರಾದ ಅರುಣ ಗೋನಾಯಕ, ರೇವಯ್ಯ ಸ್ವಾಮಿ, ಕೆಎಮ್ಎಫ್ ಅಧ್ಯಕ್ಷ ಸಿದ್ದು ಬಾಳಿ, ಮುಸ್ಲಿಂ ಯುವ ಮುಖಂಡರಾದ ಅಮೀರ ಪಾಶಾ ಚಾವುಸ್, ಮಹೇಬೂಬ್ ಶಿರೂರ್, ಅಯೂಬ್ ಖಾನ್, ಅಲ್ತಾಫ್, ಮೈನೋದ್ದಿನ್ ಲದಾಫ್, ಸಯ್ಯದ್ ಗುಂಡಗುರ್ತಿ ಇದ್ದರು.