ಸುರಪುರ: ನಗರದ ದರಬಾರ್ ಶಾಲಾ ಆವರಣದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಖತೀಜಾ ಎಂ ಜಮಾದಾರ್ ಪೌಂಡೇಶನ್ ಲೋಕಾರ್ಪಣೆ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀನಿವಾಸ ಜಾಲವಾದಿ ಮಾತನಾಡಿ, ಮಕ್ಕಳ ಬೆಳವಣಿಗೆಯಲ್ಲಿ ತಾಯಿಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಅವರ ಹೆಸರನ್ನು ಅಜರಾಮರಗೆuಟಿಜeಜಿiಟಿeಜಳಿಸುವಲ್ಲಿ ಈ ಕಾರ್ಯಕ್ರಮ ಉತ್ತಮವಾಗಿದೆ ಎಂದು ಅಭಿಪ್ರಾಯಪಟ್ಟರು. ಆರೊ?ಗ್ಯ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ತಮ್ಮದೇ ಆದ ವೈಯಕ್ತಿಕ ಸಮಾಜ ಸೇವೆ ಮಾಡುವ ಉದ್ದೇಶದಿಂದ ತಾಯಿಯವರ ಹೆಸರಿನಲ್ಲಿ ಫೌಂಡೇಶನ್ ಇಂದು ಉದ್ಘಾಟಿಸಿರುವುದು ಅತ್ಯಂತ ಶ್ಲಾಘನೀಯವಾದುದು
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನ್ಯಾಯವಾದಿ ಜೆ.ಅಗಸ್ಟಿನ್ ಮಾತನಾಡುತ್ತಾ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಫೌಂಡೇಶನ್ ವತಿಯಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿ ಅವರಿಗೆ ಇನ್ನಷ್ಟು ಆರ್ಥಿಕ ಶಕ್ತಿ ದೇವರು ಕೊಡಲಿ ಎಂದು ಹಾರೈಸಿ.
ಮುಖ್ಯ ಅತಿಥಿಗಳಾಗಿ ಅಮರೇಶ ಕುಂಬಾರ ಕ್ಷೇತ್ರ ಸಮನ್ವಯಾಧಿಕಾರಿಗಳು ,ಸೋಮರೆಡ್ಡಿ ಮಂಗಿಹಾಳ ಖಜಾಂಚಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಜಾಕಿರ್ ಹುಸೇನ್ ಅಧ್ಯಕ್ಷರು ಉರ್ದು ಶಾ ಶಿ ಸಂಘ, ಬಸವರಾಜ ಜಮದ್ರಖಾನಿ ಅಧ್ಯಕ್ಷರು ಕನ್ನಡ ಸಾಹಿತ್ಯ ಸಂಘ, ಖಾದರಪಟೇಲ್ ಬಿಆರ್ ಪಿ, ಆರ್. ಕೆ. ಕೂಡಿಹಾಳ ಅಧ್ಯಕ್ಷರು ಪ್ರೌಢಶಾಲಾ ಶಿಕ್ಷಕರ ಸಂಘ,ಇಕ್ಬಾಲ್ ರಾಹಿ ಉರ್ದು ಸಾಹಿತಿಗಳು, ಕಲೀಮ್ ಪರಿಧಿ ಸಾಮಾಜಿಕ ಕಾರ್ಯಕರ್ತರು, ಉಸ್ಮಾನ್ ಖಾನ್ ಗುತ್ತಿಗೆದಾರರು, ಅನಿಲ್ ಔಶಾ ಸಂಯೋಜಕರು ಎಪಿಎಫ್, ಮುಖ್ಯಗುರು ಸುಭಾಷ್ ಕೊಂಡಗೂಳಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಬೂಬ್ ಸಾಬ್ ಜಮಾದಾರ್ ವಹಿಸಿ???ಂಡಿದ್ದರು,
ಪ್ರಾಸ್ತಾವಿಕವಾಗಿ ಅನ್ವರ್ ಜಮಾದರ್ ಮಾತನಾಡಿದರು. ವಿನೋದಕುಮಾರ ನಿರೂಪಿಸಿದರು.
ರಾಜಶೇಖರ ದೇಸಾಯಿ ವಂದಿಸಿದರು,ಕಾರ್ಯಕ್ರಮದಲ್ಲಿ ಎಪಿಎಫ್ ನ ಪರಮಣ್ಣ ತೆಳಗೇರಿ, ಶಿಕ್ಷಕರಾದ ಶ್ರೀಶೈಲ ಯಂಕಂಚಿ, ಅಬ್ದುಲ್ ಪಟೇಲ್,, ಫರೀದಾಬೇಗಮ್ ಶಿಕ್ಷಕರು, ಜಮಾದಾರ ಕುಟುಂಬ ವರ್ಗದವರು, ಸ್ನೇಹಿತರು, ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು